ಮಂಗಳವಾರ, ಮೇ 8, 2012

ಡೋನೆಶನಗೆ ಯಾಕಿಲ್ಲ ಕಡಿವಾಣ ? ಡಿ.ಸಿ, ಡಿ.ಡಿ.ಪಿ.ಐ ಎನಾಮಾಡ್ತಾರೆ ! ಡೋನೆಶನ್ ಹಾವಳಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡಿದೆ. ಕ್ರಮ ಕೈ ಗೊಳ್ಳಬೇಕಾದ ಡಿ.ಸಿ ಮತ್ತು ಡಿ.ಡಿ.ಪಿ.ಐ ಮೌನ ವಹಿಸಿರುವುದರ ಹಿಂದೆ ದೊಡ್ಡ ಲಾಭಿ ನಡೆದಿದೆ ಎಂದು ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್.ಎಫ್.ಐ) ಕೊಪ್ಪಳ ಜಿಲ್ಲಾ ಸಮಿತಿಯು ಆರೋಪಿಸಿದೆ. ಡಿ.ಸಿ ಮೌನ : ಇಡೀ ಜಿಲ್ಲೆಯಲ್ಲಿ ವ್ಯಾಪಕವಾಗಿ ಹಬ್ಬಿರುವ ಡೊನೆಶನ್ ಹಾವಳಿಯನ್ನು ನಿಯಂತ್ರಿಸುವ ಶಕ್ತಿ ಜಿಲ್ಲಾಧಿಕಾರಿಗಳಿಗೆ ಇದ್ದರು, ಮೌನ ವಹಿಸಿರುವುದು ಹಲವಾರು ಅನುಮಾನಗಳಿಗೆ ಆಸ್ಪದ ನೀಡುತ್ತಿದೆ. 1983 ರ ಕಾಯ್ದೆಯ ಪ್ರಕಾರ ಡೊನೆಶನ್ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ ಖಾಸಗಿ ಶಾಲೆಗಳನ್ನು ನಿಯಂತ್ರಿಸುವ ಅಧಿಕಾರ ನೀಡಿದೆ. ಡೊನೆಶನ್ ಹಾವಳಿ ತಡೆಯುವಂತೆ ಮತ್ತು ಡೊನೆಶನ್ ವಿರೋಧಿ ಸಮಿತಿ ರಚಿಸುವಂತೆ ಒತ್ತಾಯಿಸಿ ಎಪ್ರಿಲ್ 20 ರಂದು ಎಸ್.ಎಫ್.ಐ ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ಧರಣಿ ನಡೆಸಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿತ್ತು. ಕೊಪ್ಪಳದ ಸ್ವಾಮಿ ವಿವೇಕಾನಂದ ಮತ್ತು ಗಂಗಾವತಿಯ ಚೈತನ್ಯ ಎಂಬ ಖಾಸಗಿ ಶಾಲೆಗಳಲ್ಲಿ 45000 ಕ್ಕು ಹೆಚ್ಚು ಹಣ ಪಡೆದು ವಿದ್ಯಾಥರ್ಿಗಳಿಗೆ ಮತ್ತು ಸರಕಾರಕ್ಕೆ ಮೋಸಮಾಡಲಾಗುತ್ತದೆ ಎಂದು ದಾಖಲೆ ಸಮೇತ ದೂರು ನೀಡಿದರು ಕ್ರಮ ಜರುಗಿಸಲು ಮುಂದಾಗುತ್ತಿಲ್ಲ. ಡೊನೆಶನ್ ವಿರೋಧಿ ಸಮಿತಿ ರಚನೆ ಮಾಡದೆ ಜಿಲ್ಲಾಧಿಕಾರಿಗಳೆ ಕಾನೂನು ಉಲ್ಲಂಘನೆ ಮಾಡುತ್ತಿರುವುದರ ಪರಿಣಾಮವಾಗಿ ಖಾಸಗಿ ಶಾಲೆಗಳಿಗೆ ಭಯ ಇಲ್ಲಂದಂತಾಗಿ ಪಾಲಕರಿಂದ ಹಣವನ್ನು ಮನಸೋ ಇಚ್ಚ ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಎಸ್.ಎಫ್.ಐ ಆರೋಪಿಸಿದೆ. ಡಿ.ಡಿ.ಪಿ.ಐ 'ಖಾಸಗಿ' ಪಾಲು : ಖಾಸಗಿ ಶಾಲೆಗಳ ಡೊನೆಶನ್ ಹಾವಳಿಯನ್ನು ನಿಯಂತ್ರಣ ಮಾಡಬೇಕಾಗಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿದರ್ೇಶಕರು ತಮಗೆ ಸಂಬಂಧವಿಲ್ಲ ಎಂಬಂತೆ ವಗರ್ಾವಣೆಯಲ್ಲಿ ಬ್ಯೂಸಿಯಾಗಿದ್ದಾರೆ. ಡಿ.ಡಿ.ಪಿ.ಐ ರವರು ಈ ರೀತಿಯ ನಿರ್ಲಕ್ಷ್ಯ ತೋರುತ್ತಿರುವುದಕ್ಕೆ ಕಾರಣ ತಿಳಿದು ಬರುತ್ತಿಲ್ಲ ಹೋರಾಟ ಮಾಡಿ ದಾಖಲೆ ಸಮೇತ ದೂರು ನೀಡಿದರು ಸರಕಾರಿ ನನಿಯಮ ಉಲ್ಲಂಘನೆ ಮಾಡಿರುವ ಆ ಎರಡು ಶಾಲೆಗಳ ಮೇಲೆ ಕ್ರಮ ಕೈಗೊಂಡಿಲ್ಲ. ಬಹುಷಃ ಡಿ.ಡಿ.ಪಿ.ಐ ರವರು ಖಾಸಗಿ ಶಾಲೆಗಳ ದುಡ್ಡಗೆ ತಮ್ಮನ್ನು ಮಾರಿಕೊಂಡಿರಬಹುದೆ ಎಂದು ಎಸ್.ಎಫ್.ಐ ಉಪನಿದರ್ೇಶಕರ ವರ್ತನೆಗೆ ಬೇಸರ ವ್ಯಕ್ತ ಪಡಿಸಿದೆ. ಶಿಕ್ಷಣ ಹಕ್ಕು ಜಾರಿಯಾವಾಗ : ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಮಸೂದೆ 2009 ನ್ನು ಖಾಸಗಿ ಶಾಲೆಗಳಿಗೆ ಅಳವಡಿಸಬೇಕು ಎಂದು ಸುಪ್ರಿಂ ಕೋರ್ಟ ತೀಪರ್ುನೀಡಿರುವ ಹಿನ್ನಲೆಯಲ್ಲಿ 25% ಸೀಟನ್ನು ಬಡ ವಿದ್ಯಾಥರ್ಿಗಳಿಗೆ ಮೀಸಲಿಡಬೇಕು ಆದರೆ ಜಿಲ್ಲೆಯಲ್ಲಿ ಆ ಕಾಯ್ದೆಯನ್ನು ಯಾವ ಖಾಸಗಿ ಶಾಲೆಗಳು ಜಾರಿ ಮಾಡಿಲ್ಲ. ಅದೀಕಾರಿಗಳು ಮತ್ತು ಖಾಸಗಿ ಶಾಲೆಗಳ ಒಳ ಒಪ್ಪಂದ ಮಾಡಿಕೊಂಡು ಮಹತ್ವದ ಯೋಜನೆಯನ್ನು ದಾರಿತಪ್ಪಿಸಿತ್ತಿವೆ. ಕೂಡಲೆ ಶಿಕ್ಷಣ ಹಕ್ಕಯ ಕಾಯ್ದೆ ಜಾರಿಯಾಗಬೇಕು, ಡೊನೆಶನ್ ಹಾವಳಿಗೆ ನಿಯಂತ್ರಣ ಹಾಕಬೇಕು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡೊನೆಶನ್ ವಿರೋಧಿ ಸಮಿತಿರಚನೆ ಮಾಡಬೇಕು ಎಂದು ಎಸ್.ಎಫ.ಐ ಜಿಲ್ಲಾಧ್ಯಕ್ಷ ಗುರುರಾಜ ದೇಸಾಯು, ಮುಖಂಡರಾದ ಸುಬಾನ್ ಸಯ್ಯದ್, ಹನಮಂತ ಭಜಂತ್ರಿ, ಯಮನೂರ್, ದೇವರಾಜ್ ನಾಯ್ಕರ್ ಒತ್ತಾಯಿಸಿದ್ದಾರೆ.

ಭಾನುವಾರ, ಏಪ್ರಿಲ್ 29, 2012

ಶೋಷಣೆ ಮಾಲಿಕನ ದರ್ಬಾರಿಗೆ ಒಳಗಾಗಿ ಶಕ್ತಿಯನ್ನೆಲ್ಲಾ ಮಾರಿದೆ ಅವನಿಗಾಗಿ ಕುಟುಂಬದ ಹಸಿವಿನ ಜೋಳಿಗೆಗಾಗಿ (1) ದುಡಿದು-ದುಡಿದು ಬಡ ಜೀವ ಬೆಂಡಾಗಿದೆ ಜೀವಕ್ಕೆ ಭದ್ರತೆಯಂತು ಇಲ್ಲವೇ ಇಲ್ಲ ಸೌಲಭ್ಯದ ಕನಸಂತು ದೂರ-ದೂರ ಯಜಮಾನನ ಸಾಲಕ್ಕೆ ಸಿಲುಕಿ, ಇದ್ದ ಸೂರ ಕಳೆದುಕೊಂಡೆ (2) ಇನ್ನು ನಿಂತಿಲ್ಲ......., ಕಾರ್ಮಿಕರ ಮೇಲೆ ದಾಳಿ ನಡೆಯುತ್ತಿದೆ ನಿತ್ಯ ಜೀವಹೀರುವ ಪಾಳಿ ಕಾರ್ಮಿಕರೆಲ್ಲ ಒಂದಾಗಿ ಸಾಗಿಸಬೇಕಿದೆ ಕ್ರಾಂತಿ ದಾರಿ (3) --- ಗುರುರಾಜ್ ದೇಸಾಯಿ ತಲ್ಲೂರು 944926018

ಭಾನುವಾರ, ಏಪ್ರಿಲ್ 22, 2012

ಜ್ಞಾನ-ಶೀಲ-ಏಕತೆ’ ಶಿಕ್ಷಣ ರಂಗದಲ್ಲಿ ಇದೇನ್ಕತೆ?!

ಜ್ಞಾನ-ಶೀಲ-ಏಕತೆ’ ಶಿಕ್ಷಣ ರಂಗದಲ್ಲಿ ಇದೇನ್ಕತೆ?! ಜ್ಞಾನ-ಶೀಲ-ಏಕತೆ ಎಂದು ದಶಕಗಳ ಕಾಲ ಕೂಗುತ್ತಿದ್ದ, ಕಿರುಚುತ್ತಿದ್ದ ಅ.ಭಾ.ವಿ.ಪ.ದ ವಿದ್ಯಾರ್ಥಿ ಮುಖಂಡರೇ ರಾಜ್ಯದಲ್ಲಿ ಇಂದು ಶಿಕ್ಷಣ ಮಂತ್ರಿಗಳಾಗಿದ್ದಾರೆ. ಹಿಂದೂ ರಾಷ್ಟ್ರ ನಿರ್ಮಾಣ ಗುರಿಯ ಭಾರತೀಯ ಜನತಾ ಪಕ್ಷ ಅಧಿಕಾರದಲ್ಲಿದೆ.ಭವ್ಯ ಸನಾತನ ಸಂಸ್ಕೃತಿಯ ರಕ್ಷಣೆಯ ಕಾರ್ಯಸಾಧನೆಗಾಗಿ ಇಲ್ಲಿ ಜಾನುವಾರು ಹತ್ಯೆ ನಿಷೇಧ ಕಾಯ್ದೆ ಇತ್ಯಾದಿ ಇತ್ಯಾದಿ ಏನೇನೋ ತರುವ ಕಡೆಗೆ ಸರ್ಕಾರದ ಗಮನ ನೆಟ್ಟಿದೆ. ಇವೆಲ್ಲಾ ಒಂದು ಕಡೆ. ಆ ಕಡೆ ರಾಜ್ಯದ ಗುಲ್ಬರ್ಗಾ ಜಿಲ್ಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ದಾಸ್ತುನು ಮಳಿಗೆಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಅಲ್ಲಿ ಸಿಕ್ಕಿದ್ದೇನು? ಈ ವರ್ಷ ಶಾಲಾ ಮಕ್ಕಳಿಗೆ ವಿತರಣೆ ಮಾಡದೇ ಹಾಗೆ ಸಂಗ್ರಹಿಸಿಟ್ಟಿದ್ದ ಶಾಲಾ ಪಠ್ಯ ಪುಸ್ತಕಗಳು. ಅದೂ ಎಷ್ಟು? ಬರೋಬ್ಬರಿ 30 ಸಾವಿರ ಪುಸ್ತಕಗಳು. ಬರೀ ಈ ವರ್ಷದಲ್ಲಿ ಮಾತ್ರವಲ್ಲ. ಈ ಹಿಂದಿನ ವರ್ಷಗಳ ಪಠ್ಯಪುಸ್ತಕಗಳೂ ದೊಡ್ಡ ಪ್ರಮಾಣದಲ್ಲಿ ಧೂಳು ತಿನ್ನುತ್ತಾ ಅಲ್ಲಿ ಬಿದ್ದಿವೆ. ಎಷ್ಟೋ ಪುಸ್ತಕಗಳಿಗೆ ಗೆದ್ದಲು ಹಿಡಿದು ಬಿಟ್ಟಿದೆ. ಹೊರಗೆ ನೋಡಿದರೆ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ಸಿಗುತ್ತಿಲ್ಲ. ಶಿಕ್ಷಕರ ಪಾಠ ಪ್ರವಚನಕ್ಕೆ , ಮಕ್ಕಳ ಓದು-ಬರಹಕ್ಕೆ ತೀರಾ-ತೊಂದರೆಯಾಗಿದೆ. ಇನ್ನು ಯಾವ ಯಾವ ಜಿಲ್ಲೆಯಲ್ಲಿ `ಇನ್ನೂ ಏನೇನು ಪರಿಸ್ಥಿತಿ ಇದೆಯೋ ಜ್ಞಾನ-ಶೀಲ-ಏಕತೆ ಗಳಿಸಿ, ಸಾಧಿಸಿ, ರಾಜ್ಯದ ಸನ್ಮಾನ್ಯ ಮಂತ್ರಿ ಸ್ಥಾನಕ್ಕೇರಿರುವ ಸಚಿವಧ್ವಯರೇ ಹೇಳಬೇಕಾಗಿದೆ. `ಹೆಚ್ಚುವರಿ’ ವಿದ್ಯುತ್ ಕೊಡಲಾಗದು’ ಸುಮಾರು ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಬಿಜೆಪಿ ದರ್ಬಾರ್ ಆರಂಭವಾದಾಗ ರಾಜ್ಯದ ವಿದ್ಯುತ್ ಪರಿಸ್ಥಿತಿ, ವಿದ್ಯುತ್ ಅಭಾವದ ಬಗೆಗೆ ಮುಖ್ಯಮಂತ್ರಿ ಡಾ:ಯಡಿಯೂರಪ್ಪ ಬಾರಿ ಹಾರಾಡುತ್ತಿದ್ದರು. ವಿದ್ಯುತ್ ಅಭಾವಕ್ಕೆ ಇಲ್ಲಿಯವರೆಗೆ ಆಳಿದ ಕಾಂಗ್ರೆಸ್, ಜನತಾದಳ ಮುಂತಾದ ಪಕ್ಷಗಳೇ ಹೊಣೆ ಎಂದು ದಾಳಿ ಮಾಡಿ, ತಮ್ಮ ಸರ್ಕಾರ ಸಮಸ್ಯೆಯನ್ನು ಸಂಪೂರ್ಣವಾಗಿ ಬಗೆಹರಿಸುವುದೆಂದು ಘೋಷಿಸುತ್ತಿದ್ದರು. ಅದರಲ್ಲಿ ತಾತ್ಕಾಲಿಕ ವಿದ್ಯುತ್ ಖರೀದಿ ಯೋಜನೆಗಳಲ್ಲದೆ, ಛತ್ತೀಸ್ಗಢ ಮುಂತಾದೆಡೆ ರಾಜ್ಯಕ್ಕೆ ವಿದ್ಯುತ್ ಪೂರೈಸುವ ಕಲ್ಲಿದ್ದಲು ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ ಬಗ್ಗೆಯೂ ಇರುತ್ತಿತ್ತು. ಈಗ ಯಡಿಯೂರಪ್ಪ ಚೆನ್ನಾಗಿ `ಮಾಗಿದ್ದಾರೆ’! ರಾಜ್ಯದಲ್ಲಿ ನಗರ -ಗ್ರಾಮಾಂತರ ಎಲ್ಲ ಕಡೆ ತೀವ್ರ ಲೋಡ್ಶೆಡ್ಡಿಂಗ್. ಯಾವಾಗ ಕರೆಂಟು ಇರುತ್ತದೆ. ಯಾವಾಗ ಕರೆಂಟು ಹೋಗುತ್ತದೆ ಯಾರಿಗೂ ಗೊತ್ತಿಲ್ಲ ಎಂಬಂತಹ ಅರಾಜಕ ಸ್ಥಿತಿ. ಆದರೆ ಯಡಿಯೂರಪ್ಪ `ರಾಜ್ಯದ ಕೆಲವು ಜಲಾಶಯಗಳು ತುಂಬಿಲ್ಲ. ಜನರಿಗೆ ಹೆಚ್ಚುವರಿ ವಿದ್ಯುತ್ ಕೊಡಲು ಸಾಧ್ಯವಿಲ್ಲ’ ಅಂತ ತಣ್ಣಿಗೆ ಕೈ ಚೆಲ್ಲಿದ್ದಾರೆ. ಜನ ಕೇಳುತ್ತಿರುವುದು ಹೆಚ್ಚುವರಿ ವಿದ್ಯುತ್ತಲ್ಲ. ಈಗ ಕೊಡದೇ ಕಿತ್ತುಕೊಳ್ಳಲಾಗಿರುವ ವಿದ್ಯುತ್ ಅಂತ ಯಡಿಯೂರಪ್ಪನವರಿಗೆ ಯಾರು ಹೇಳುವುದು. ರಾಯಚೂರು, ಬಳ್ಳಾರಿಗಳಲ್ಲಿನ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ ತಾಂತ್ರಿಕ ಸಮಸ್ಯೆ ಸಮಸ್ಯೆಯಿಂದಾಗಿ ಉತ್ಪಾದನೆ ಕುಸಿದಿದೆ. ಇದು ನಿನ್ನೆ ಮೊನ್ನೆ ಆದದ್ದಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಈ ತೊಂದರೆ ಕಾಣಿಸಿಕೊಳ್ಳುತ್ತಿದೆ. ಆದರೆ ರಾಜ್ಯ ಬಿಜೆಪಿ ಸಕರ್ಾರ ಸ್ಥಾವರಗಳ ದುರಸ್ಥಿಗೆ ಮತ್ತು ಸಮರ್ಪಕವಾದ ನಿರ್ವಹಣೆಗೆ ಗಮನ ನೀಡುತ್ತಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಮಾರುತಿ ಮಾನ್ಪಡೆಯವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಂತೂ ರಾಜ್ಯದಲ್ಲಿ ದುಡಿದು, ದಣಿದು ಬಂದ ಜನರು ರಾತ್ರಿ ತಮ್ಮ ಅನ್ನವನ್ನು (ಅದು ಇದ್ದರೆ) ಕತ್ತಲಲ್ಲೇ ಉಂಡು ಕತ್ತಲಲ್ಲೇ ಕೈತೊಳೆಯಬೇಕಾದ ಪರಿಸ್ಥಿತಿ. ಬಸ್ ಪಾಸ್ – ವಿದ್ಯಾರ್ಥಿ ಪಾಸ್ ದುಬಾರಿ ಬೆಂಗಳೂರಿನಲ್ಲಿ ದಿನವೊಂದಕ್ಕೆ 40 ಲಕ್ಷ ಜನ ಪ್ರಯಾಣಿಕರು ಬಿ.ಎಂ.ಟಿ.ಸಿ. ಬಸ್ಗಳಲ್ಲಿ ಪ್ರಯಾಣಿಸುತ್ತಾರೆ. ನಿಯಮಿತವಾಗಿ ನಿರಂತರವಾಗಿ ಬಸ್ನಲ್ಲಿ ಪ್ರಯಾಣ ಮಾಡುವವರು ತಿಂಗಳ ಪಾಸ್ ಮಾಡಿಸುತ್ತಾರೆ. ಹಾಗಿಲ್ಲದವರು ಹೆಚ್ಚು ಓಡಾಟ ಇರುವ ದಿನ ದಿನದ ಪಾಸನ್ನು ಕೊಂಡು ಓಡಾಡುತ್ತಾರೆ. ಕೇಂದ್ರ ಸರ್ಕಾರದ ಪೆಟ್ರೋಲ್-ಡೀಸೆಲ್ ಬೆಲೆ ಏರಿಸಿದ ಕೂಡಲೇ ರಾತ್ರೋರಾತ್ರಿ ಬಸ್ ಟಿಕೆಟ್ (ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯದು ಸೇರಿ) ಬೆಲೆಗಳು ಹಾಗೂ ವಿವಿಧ ಬಗೆಯ ಮಾಸಿನ-ದೈನಂದಿನ ಪಾಸುಗಳ ಬೆಲೆಗಳು ಏರಿಬಿಟ್ಟವು. ಈಗ ದಿನದ ಪಾಸುಕೊಂಡು ಓಡಾಡುವ ಪ್ರಯಾಣಿಕರು ಮತ್ತೊಂದು ಸುತ್ತಿನ ಆಘಾತ ಎದುರಿಸಬೇಕಾಗಿದೆ. ಇದೀಗ ಬಸ್ ಪಾಸ್ ಬೆಲೆ ರೂ.35ರೂ. ಇದ್ದದ್ದು ಮತ್ತೆ ದಿಢೀರನೆ 40 ರೂ.ಗೆ ಏರಿ ಬಿಟ್ಟಿದೆ. ರೂ.35ರೂ. ದಿನದ ಪಾಸುಗಳು ಸಿಗುತ್ತವೆ. ಆದರೆ ಅದಕ್ಕೆ ಪ್ರಯಾಣಿಕರು ಸಾರಿಗೆ ಸಂಸ್ಥೆಗೆ 100 ರೂಪಾಯಿ ತೆತ್ತು ಒಂದು ವರ್ಷದ ಅವಧಿಗೆ ಗುರುತಿನ ಚೀಟಿ ಮಾಡಿಸಬೇಕಂತೆ. ದರ ಏರಿಕೆಯ ಆಘಾತಕ್ಕೆ ಗುರಿಯಾದ ಜನರು ಅದರಲ್ಲೂ ಬಡಜನರು, ಸರ್ಕಾರದ ಹಾಗೂ ಸಾರಿಗೆ ಸಂಸ್ಥೆಯ ಧೋರಣೆ ವಿರುದ್ಧ ಸಿಟ್ಟು ವ್ಯಕ್ತಪಡಿಸಿ ಕಂಡಕ್ಟರ್ ಜೊತೆ ವಾಗ್ವಾದಕ್ಕಿಳಿಯುವುದು ಸಾಮಾನ್ಯವಾಗಿ ಎಲ್ಲೆಡೆ ಕಂಡು ಬರುತ್ತಿದೆ. ಈ ಸಂದರ್ಭದಲ್ಲೆಲ್ಲಾ ಜನ ಹೇಳುವುದೇನೆಂದರೆ ನೆರೆಯ ತಮಿಳುನಾಡು, ಆಂಧ್ರ, ಕೇರಳ ಎಲ್ಲಿಗೆ ಹೋಲಿಸಿಕೊಂಡರೂ ಬೆಂಗಳೂರು ಮತ್ತು ರಾಜ್ಯದಲ್ಲಿ ಟಿಕೆಟ್ ದರಗಳು ಅತ್ಯಂತ ದುಬಾರಿ ಅಂತ. ಅದು ನಿಜವೇ. ಅದು ಹಾಗಿರಲೇ ಬೇಕು. ಏಕೆಂದರೆ ದಕ್ಷಿಣ ರಾಜ್ಯದಲ್ಲೆಲ್ಲಾ ಕರ್ನಾಟಕದಲ್ಲೇ ತಾನೆ ಬಿಜೆಪಿ ದರ್ಬಾರ್ ಇರುವುದು. ವಿದ್ಯಾರ್ಥಿಗಳನ್ನು ಬಿಟ್ಟಿರಲಿಲ್ಲ ಪ್ರಯಾಣ ದರ ಏರಿಕೆ ವಿದ್ಯಾರ್ಥಿಗಳನ್ನು ಕೂಡ ಬಿಟ್ಟಿರಲಿಲ್ಲ. ಈ ವರ್ಷ ಕಾಲೇಜು ವಿದ್ಯಾರ್ಥಿಗಳಿಗೆ 200 ರೂಪಾಯಿಗಳಷ್ಟು ಬಸ್ಪಾಸ್ ದರವನ್ನು ಏರಿಸಲಾಗಿತ್ತು. ವಿದ್ಯಾರ್ಥಿಗಳು ರಾಜ್ಯವ್ಯಾಪಿಯಾಗಿ ಪ್ರತಿಭಟನೆ ನಡೆಸಿದ ಮೇಲೆ ಸರ್ಕಾರ ವಿದ್ಯಾರ್ಥಿಗಳ ಪಾಸ್ ದರ ಏರಿಕೆ ವಾಪಸ್ ಪಡೆದಿದೆ. ಬಿಜೆಪಿ ದರ್ಬಾರ್ಗೆ ವಿದ್ಯಾರ್ಥಿಗಳಿಂದಲೂ ಛೀಮಾರಿ. ಡೆಂಗ್ಯೂಗೆ `ಪರಿಹಾರ ಘೋಷಣೆ ವೀರ ಸರ್ಕಾರ ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳು ಮೊನ್ನೆ ಡೆಂಗ್ಯೂ ಖಾಯಿಲೆಯ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ ಎಂದು ಘೋಷಿಸಿದರು. ಇದರ ಅರ್ಥವೇನು? ಡೆಂಗ್ಯೂ ಪೀಡಿತರು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಆ ವೆಚ್ಚವನ್ನು ಸರ್ಕಾರ ಭರಿಸುವುದು ಅಂತ. ಈ ಘೋಷಣೆಯ ಹಿಂದೆಯೇ ಸರ್ಕಾರದ ಆಡಳಿತ ಯಂತ್ರದ ಹಿರಿಯ ಅಧಿಕಾರಿಗಳಿಂದಲೇ ಅಪಸ್ವರ ಹೊರಟಿತು. ಇದು ಕಾರ್ಯಸಾಧ್ಯ ಅಲ್ಲ ಅಂತ. ಯಡಿಯೂರಪ್ಪ ಸರ್ಕಾರ ಹಿಂದೆ ಹೆಚ್1 ಎನ್1 ಕಾಯಿಲೆ ಬಗೆಗೆ ಕೂಡ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಘೋಷಿಸಿತ್ತು. ಆದರೆ ಒಂದು ವರ್ಷ ಕಳೆದರೂ ಯಾರಿಗೂ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಕೊಟ್ಟೇ ಇಲ್ಲವಂತೆ. ಖಾಸಗಿ ಆಸ್ಪತ್ರೆಗಳಿಂದ ಮನವಿಗಳೂ ಹೆಚ್ಚಿನ ಕಡೆಯಿಂದ ಬಂದಿಲ್ಲವಂತೆ. ಯಾಕೆ ಹೇಗೆ. ಹೆಚ್1.ಎನ್1 ರೋಗಿಗೆ ಒಬ್ಬರಿಗೆ ಈ ಸಕರ್ಾರ ನೀಡುವುದಾಗಿ ಹೇಳಿದ್ದು 2000 ರೂಪಾಯಿ. ಅದಕ್ಕೆ ನೂರೆಂಟು ಕೊಕ್ಕೆ, ತಕರಾರು ಪ್ರಕ್ರಿಯೆಗಳು. ಇಷ್ಟಾದ ಮೇಲೂ ಅದು ಹಣ ಕೈಗೆ ದಕ್ಕುತ್ತದೆ ಎಂಬ ಖಾತರಿ ಏನಿಲ್ಲ. 2 ಸಾವಿರ ರೂಪಾಯಿ ಪಡೆದುಕೊಳ್ಳಲು ಒಂದೂವರೆ ಸಾವಿರ, ಒಂದೂ ಮುಕ್ಕಾಲು ಸಾವಿರ ಖರ್ಚು ಮಾಡಬೇಕಾಗಿ ಬಂದರೆ ಯಾರು ತಾನೇ ಅರ್ಜಿ ಹಾಕುತ್ತಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಘೋಷಣೆವೀರ ಸರ್ಕಾರ ಅಂತ ಏನಾದರೂ ಒಂದು ಬಿರುದು ಕೊಡಬಹುದೇನೋ? ಅಂದ ಹಾಗೆ ಡೆಂಗ್ಯೂ ಪೀಡಿತರಿಗೆ ಸರ್ಕಾರ ತಲಾ ರೋಗಿಗೆ ಎಷ್ಟು ಹಣ ನೀಡುತ್ತದೆ ಎಂಬುದನ್ನು ನಿರ್ಧಿಷ್ಟವಾಗಿ ಹೇಳಿಲ್ಲ. ಯಾರಿಗೆ ತಾನೆ ನಂಬಿಕೆ ಬರುತ್ತದೆ ಸರ್ಕಾರದ ಬಗ್ಗೆ.

ಡೊನೇಷನ್ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ

ಡೊನೇಷನ್ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ ಡೊನೇಷನ್ ಹಾವಳಿ ನಿಯಂತ್ರಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ಪ್ರತಿಭಟನೆ ಜಿಲ್ಲಯಯಲ್ಲಿರು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಡೋನೇಷನ್ ಹಾವಳಿ ವ್ಯಾಪಕವಾಗಿ ನಡೆಯುತ್ತಿದೆ.ಎಂದು ಆರೋಪಿಸಿ ಭಾರತ ವಿದ್ಯಾಥರ್ಿ ಫೆಡರೇಷನ್ (ಎಸ್.ಎಫ್.ಐ) ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಛೆರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರವೇಶಾತಿ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಚೆ ಹಣವನ್ನು ಪಾಲಕರಿಂದ ಸುಲಿಗೆ ಮಾಡುತ್ತಿವೆ. ಎಲ್.ಕೆ.ಜಿ ಗೆ ಪ್ರವೇಶ ಪಡೆಯಲು 20 ರಿಂದ 40 ಸಾವಿರ ರೂಹಣವನ್ನು ಪಡೆಯುತ್ತಿದ್ದಾರೆ. ಗಂಗಾವತಿಯ ಚೈತನ್ಯ ಪಬ್ಲಿಕ್ ಶಾಲೆಯಲ್ಲಿ ಬೇಬಿ ಕ್ಲಾಸ್ ಗೆ 44.480 ರೂ ಹಣ ಪಡೆಯಲಾಗುತ್ತಿದೆ ಸರಕಾರಿ ನಿಯಮ ಉಲ್ಲಂಘಿಸಿರುವ ಈ ಶಾಲೆಯ ಮೇಲೆ ಶಿಸ್ಥಿನ ಕ್ರಮ ಜರುಗಿಸಬೇಕು. ಕೊಪ್ಪಳದ ಸ್ವಾಮಿವಿವೇಕಾಂದ ಖಾಸಿಗಿ ಶಾಲೆಯಲ್ಲಿ 25000 ರೂ ಡೊನೇಷನ್ ಪಡೆಯಲಾಗುತ್ತಿದೆ. ಅದಕ್ಕಾಗಿ ಪ್ರಗತಿ ಹಾರ್ಡವೇರ್ ನಲ್ಲಿ ಡೀಲಿಂಗ್ ಮಾಡಲಾಗುತ್ತಿದೆ.ಇದಕ್ಕೇನು ಕ್ರಮವನ್ನು ಕೈಗೊಳ್ಳುತ್ತಿರಿ ಎಂದು ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಜಿಲ್ಲಾ ಉಪಾಧ್ಯಕ್ಷ ಅಮರೇಶ್ ಕಡಗದ್ ಮಾತನಾಡಿ ಪ್ರವೇಶಾತಿ ಸಂದಭದಲ್ಲಿ ನಿಯಮ ಉಲ್ಲಂಘಿಸಿ ಅಕ್ರಮವಾಗಿ ಪರಿಕ್ಷೆಗಳನ್ನು ನಡೆಸುತ್ತಿದ್ದಾರೆ. ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು 20ರಿಂದ 60 ಸಾವಿರ ರೂ ಹಣ ಪಡೆಯುವ ಮೂಲಕ ಶಿಕ್ಷಣವನ್ನು ವ್ಯಾಪಾರದ ಸಗಟಾಗಿ ನಿಮರ್ಾಣ ಮಾಡಿದ್ದಾರೆ. ಸೀಟುಗಳು ಭತರ್ಿಯಾಗಿವೆ ಎಂದು ಪಾಲಕರಿಂದ ಹೆಚ್ಚವರಿ ಹಣ ಪಡೆಯುವಲ್ಲಿ ಖಾಸಗಿ ಶಾಲೆಗಳು ನಿರತವಾಗಿವೆ. ಖಾಸಗಿ ಶಾಲೆಗಳಲ್ಲಿ ಡೋನೇಷನ್ ಹಾವಳಿ ಹೆಚ್ಚಾಗಿರುವುದು ಶಿಕ್ಷಣ ಇಲಾಯ ಗಮನಕ್ಕೆ ಬಂದಿದ್ದರು, ಶಿಕ್ಷಣ ಇಲಾಖೆ ಮೌನವಹಿಸಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ. ಎಂದು ಆರೋಪಿಸಿದರು. 1986 ಶಿಕ್ಷಣ ಕಾಯ್ದೆ ಪ್ರಕಾರ ಡೊನೇಷನ್ ಹಾವಳಿ ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ‘ಡೋನೇಷನ್ ವಿರೋಧಿ ಸಮಿತಿ’ ರಚಿಸುವಂತೆ ಹೇಳಿದೆ ಆದರೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿಲ್ಲ. ಹಾಗಾಗಿ ಖಾಸಗಿ ಶಾಲೆಗಳಿಗೆ ಮೂಗುದಾರವಿಲ್ಲದೆ ಪಾಲಕರಿಂದ ಹಣಸುಲಿಗೆಯಲ್ಲಿ ನಿರತರಾಗಿದ್ದಾರೆ. ಡೊನೇಷನ್ ಹಾವಳಿ ನಿಯಂತ್ರಿಸುವಂತೆ ಮತ್ತು ಡೊನೇಷನ್ ವಿರೋಧಿಸಮಿತಿ ರಚಿನೆ ಮಾಡಬೇಕು ಎಂದು ಜಿಲ್ಲಾ ಮುಖಂಡ್ ದುರಗೇಶ್ ಡಗ್ಗಿ ಆಗ್ರಹಿಸಿದರು. ಡೋನೆಷನ್ ಹಾವಳಿ ನಿಯಂತ್ರಿಸಬೇಕು ಮತ್ತು ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿ ಡೋನೇಷನ್ ವಿರೋಧಿ ಸಮಿತಿ ರಚಿಸಬೇಕು.ಅನಧಿಕೃತ ಖಾಸಗಿ ಶಾಲೆಗಳ ಮಾನ್ಯತೆಯನ್ನು ರದ್ದು ಪಡಿಸಬೇಕು. ಭಾಷಾ ನೀತಿ ಉಲ್ಲಂಘಿಸುವ ಖಾಸಗಿ ಶಾಲೆಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಸರಕಾರಿ ನಿಯಮದಂತೆ ಶುಲ್ಕ ಪಡೆಯಬೇಕು ಮತ್ತು ಶುಲ್ಕದ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಯುವಂತೆ ನೋಟಿಸ್ ಬೋರ್ಡಗೆ ಹಾಕಬೇಕು. ನಿಯಮ ಉಲ್ಲಂಘಿಸಿ ಶುಲ್ಕ ಪಡೆದಿರುವ ಖಾಸಗಿ ಶಾಲೆಗಳ ಮೇಲೆ ಕಾನೂನು ಕ್ಮ ಜರುಗಿಸಬೇಕು.ಎಸ್.ಎಫ್.ಐ ಮುಖಂಡರು, ಪಾಲಕರನ್ನು ಒಳಗೊಂಡತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಡೋನೆಷನ್ ವಿರೋಧಿಸಮಿತಿ ರಚಿಸಬೇಕು. ಎಂಬ ಬೇಡಿಕೆಗಳುಳ್ಳ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು. ಪ್ರತಿಭಟನೆಯ ನೇತ್ರತವವನ್ನು ಜಿಲ್ಲಾ ಕಾರ್ಯದಶರ್ಿ ಗ್ಯಾನೇಶ್ ಕಡಗದ್, ಹನಮಂತ ಭಜಂತ್ರಿ, ಸುಬಾನ್ ಸಯ್ಯದ್, ಮಂಜುನಾಥ ಡಗ್ಗಿ, ರಸೂಲ್, ಯಮನೂರ್, ಆನಂದ್ ಹಿರೇಮನಿ. ಲಕ್ಷಣ್, ಹನಮಯ್ಯ ಹನಮೇಶ್ ವಡಿಕಿ ಸೇರಿದಂತೆ ಅನೇಕ ಜನ ಹಾಜರಿದ್ದರು.

ಗುರುವಾರ, ಏಪ್ರಿಲ್ 19, 2012

ಐ.ಟಿ.ಐ ಕಾಲೇಜುಗಳಿಗೆ ರಜೆ ನೀಡುವಂತೆ ಒತ್ತಾಯಿಸಿ ಎಸ್.ಎಫ್.ಐ ನಿಂದ ಪ್ರತಿಭಟನೆ

ಐ.ಟಿ.ಐ ಕಾಲೇಜುಗಳಿಗೆ ರಜೆ ನೀಡುವಂತೆ ಒತ್ತಾಯಿಸಿ ಎಸ್.ಎಫ್.ಐ ನಿಂದ ಪ್ರತಿಭಟನೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು ಪರಿಣಾಮವಾಗಿ ಐ.ಟಿ.ಐ ಕಾಲೇಜುಗಳಿಗೆ ರಜೆ ನೀಡಬೇಕು ಎಂದು ಒತ್ತಾಯಿಸಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ) ಇಂದು ಪ್ರತಿಭಟನೆ ನಡೆಸಿತು. ದಿನೆ, ದಿನೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ ವಿದ್ಯಾಥರ್ಿಗಳು ಕುಳಿತುಕೊಂಡು ಪಾಠ ಕೇಳಲು ತೊಂದರೆಯಾಗುತ್ತಿದೆ. ಪ್ರಾಯೋಗಿಕ ಕೆಲಸಮಾಡುವಾಗ ಬೇವರಿನಿಂದ ದುನರ್ಾತ ಸೂಸಿ ಮೈಮೇಲೆ ಗುಳ್ಳೆಗಳು ಎಳುತ್ತಿವೆ. ಬಾಯಲ್ಲಿ ಗುಳ್ಳೆಗಳಾಗುತ್ತಿವೆ ಕಣ್ಣುರಿ, ಊರಿ ಮೂತ್ರ ಹೆಚ್ಚಾಗುತ್ತಿದ್ದು ವಿದ್ಯಾಥರ್ಿಗಳು ಸಂಕಷ್ಟವನ್ನು ಎದುರಿಸುವಂತಾಗಿದೆ. ಈಗಿರುವ ಐ.ಟಿ.ಐ ಕೋರ್ಸ ಅವೈಜ್ಷಾನಿಕವಾಗಿದ್ದು ವೈಜ್ಷಾನಿಕ ಪದ್ದತಿ ಜಾರಿಮಾಡಲು ಸರಕಾರ ಮುಂದಾಗ ಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು. ಐ.ಟಿ.ಐ ವಿದ್ಯಾಥರ್ಿಗಳ ಬಾಕಿ ಇರುವ ಶಿಷ್ಯವೇತನ, ಸ್ಟೈಫಂಡ್ ಬಿಡುಗಡೆ ಮಾಡಬೇಕು. ಪ್ರಥಮ ವರ್ಷದ ಐ.ಟಿ.ಐ ವಿದ್ಯಾಥರ್ಿಗಳಿಗೆ ಪರಿಕ್ಷೆ ನಡೆಸಬೇಕು. ಈಲ್ಲೆಯಲ್ಲಿ ವೃತ್ತಿಪರ ವಸತಿನಿಲಯ ಸ್ಥಾಪಿಸಬೆಕು ಎಂದು ಪ್ರತಿಭಟನೆ ಕಾರರು ಆಗ್ರಹಿಸಿದರು. ಸಾಹಿತ್ಯ ಭವನದಿಂದ ಮರವಣಿಗೆ ಹೋರಟು ನಗರದ ವಿವಿಧ ವೃತ್ತಗಳಲ್ಲಿ ಸಂಚರಿಸಿ ತಹಶಿಲ್ ಕಛೇರಿಯಲ್ಲಿ ಸಮಾವೇಶ ಗೊಂಡು ತಹಶಿಲ್ದಾರರಿಗೆ ಮನವಿ ಅಪರ್ಿಸಿದರು. ಪ್ರತಿಭಟನೆಯ ನೇತ್ರತ್ವವನ್ನು ಜಿಲ್ಲಾಧ್ಯಕ್ಷ ಗುರುರಾಜ್ ದೇಸಾಯಿ, ಸುಬಾನ್ ಸೈಯ್ಯದ್, ಯಮನೂರ್, ದೇವರಾಜ್ ನಾಯಕ್, ಶ್ರಿನಿವಾಸ ಕಾಸನಕಂಡಿ ಸೇರಿದಂತೆ ಸರಕಾರಿ ಐ.ಟಿ.ಐ, ಸವರ್ೋದಯ, ವಿಶ್ವೇಶ್ವರಯ್ಯ, ಗುರು, ಕರಡಿ, ಐ.ಟಿ.ಐ ಕಾಲೇಜ್ ವಿದ್ಯಾಥರ್ಿಗಳು ಭಾಗವಹಿಸಿದ್ದರು.

ಶನಿವಾರ, ಏಪ್ರಿಲ್ 7, 2012

ಬೇಸಿಗೆ ರಜೆಗೆ ಒತ್ತಾಯಿಸಿ ಎಸ್.ಎಫ್,ಐನಿಂದ ಸಹಿಸಂಗ್ರಹ ಚಳುವಳಿ

ಬೇಸಿಗೆ ರಜೆಗೆ ಒತ್ತಾಯಿಸಿ ಎಸ್.ಎಫ್,ಐನಿಂದ ಸಹಿಸಂಗ್ರಹ ಚಳುವಳಿ ಐ.ಟಿ.ಐ ಕಾಲೇಜುಗಳಿಗೆ ಬೇಸಿಗೆ ರಜೆ ನೀಡುವಂತೆ ಒತ್ತಾಯಿಸಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್.ಎಫ್.ಐ) ಕಾರ್ಯಕರ್ತರು ಇಂದು (07.04.12) ನಗರದಲ್ಲಿರುವ ಐ.ಟಿ.ಐ ಕಾಲೇಜಿಗೆ ತೆರಳಿ ಸಹಿ ಸಂಗ್ರಹ ಚಳುವಳಿ ನಡೆಸಿದರು. ಸಹಿ ಸಂಗ್ರಹ ಚಳುವಳಿ ಉದ್ಘಾಟಿಸಿ ಮಾತನಾಡಿದ, ಎಸ್.ಎಫ್,ಐ ರಾಜ್ಯ ಉಪಾಧ್ಯಕ್ಷ ಗುರುರಾಜ್ ದೇಸಾಯಿ, ಬೇರೆ ಬೇರೆ ಕೋರ್ಸಗಳಿಗೆ ರಜೆ ನೀಡುವಂತೆ ಐ.ಟಿ.ಐ ಕಾಲೇಜುಗಳಿಗೆ ರಜೆ ನೀಡಬೇಕು. ಮಲೆನಾಡಿನಲ್ಲಿ ಮಳೆಗಾಲದಲ್ಲಿ ರಜೆ ನೀಡುವಂತೆ ಬೇಸಿಗೆ ಸಂದರ್ಭದಲ್ಲಿ ಈ ಭಾಗದ ವಿದ್ಯಾಥರ್ಿಗಳಿಗೆ ರಜೆ ನೀಡಬೇಕು. ಒಂದು ಕೋಸರ್ಿಗೆ ಬೆಣ್ಣೆ ಇನ್ನೊಂದು ಕೋಸರ್ಿಗೆ ಸುಣ್ಣವೆಂಬಂತೆ ಸರಕಾರ ಐ.ಟಿ.ಐ ಕಾಲೇಜುಗಳನ್ನು ನಿರ್ಲಕ್ಷ ಮಾಡುತ್ತಿದೆ. ಉಷ್ಣಾಂಶ 39 ರಿಂದ 41 ಡಿಗ್ರಿ ಗೆ ಏರುತ್ತಿದೆ, ವಿದ್ಯಾಥರ್ಿಗಳಗೆ ತರಗತಿಗಳಲ್ಲಿ ಕುಳಿತುಕೊಂಡು ಕೇಳಲು ಮತ್ತು ಪ್ರಯೋಗಗಳನ್ನು ನಡೆಸಲು ಕಠಿಣವೆನುಸುತ್ತಿದೆ. ಪ್ರಯೋಗ ಮಾಡುವಾಗ ದೇಹದಿಂದ ಬೇವರು ಬಂದು ದೂಳ ಕುಳಿತ ಗುಳ್ಳೆಗಳು ಏಳಲು ಕಾರಣವಾಗುತ್ತಿದೆ. ಹಾಗಾಗಿ ಕೂಡಲೆ ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ರಜೆ ನೀಡಲು ಮುಂದಾಗಬೇಕು. ಎಸ್.ಎಫ್.ಐ ತಾಲ್ಲುಕಾ ಅಧ್ಯಕ್ಷ ಮಾರುತಿ ಮ್ಯಾಗಳಮನಿ ಮಾತನಾಡಿ, ಬೇಸಿಗೆ ಹೆಚ್ಚಾಗಿರುವುದರಿಂದ ವಿದ್ಯಾಥರ್ಿಗಳ ಕಲಿಕೆಗೆ ಪೂರಕವಾತವರಣವಿಲ್ಲ. ಬೆಳಗ್ಗೆ 8 ಗಂಟೆಗೆ ಕಾಲೇಜನ್ನು ಬದಲಾವಣೆ ಮಾಡಿದರೆ ಪರಿಹಾರ ಸಿಗುವುದಿಲ್ಲ್ಲ. ಹಾಗಾಗಿ ರಜೆ ನೀಡಿ ವಿದ್ಯಾಥರ್ಿಗಳ ವೈಜ್ಞಾನಿಕ ಶಿಕ್ಷಣಕ್ಕೆ ಜಿಲ್ಲಾಡಳಿತ ಮುಂದಾಗಬೇಕು ಎಂದರು. ಬೇಳಗ್ಗೆ 9 ಗಂಟೆಯಿಂದ ಮದ್ಯಾನ್ಹ 2 ಗಂಟೆಯವರೆಗೆ ವಿವಿಧ ಐ.ಟಿ.ಐ ಕಾಲೇಜುಗಳಿ ತೆರಳಿ ಸಹಿಸಂಗುಹ ಚಳುವಳಿ ನಡೆಸಿದರು. ಸರಕಾರಿ ಐ.ಟಿ.ಐ ಕಾಲೇಜಿನಿಂದ ಆರಂಭಗೊಂಡು. ಸವರ್ೋದಯ ಕಾಲೇಜಿನಲ್ಲಿ ಸಮಾರೋಪ ಗೊಂಡಿತು.ಈ ಸಂದರ್ಭದಲ್ಲಿ ಜಿಲ್ಲಾ ಮುಖಂಡರಾದ ಯಮನೂರ್ ಹೋಸಪೇಟೆ, ದಾದಾಸಾಹೇಬ್, ರವಿಕುಮಾರ್, ಸಂತೋಷ, ಶ್ರೀನಿವಾಸ, ಪರಿಮಳ, ಗೀತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಮಂಗಳವಾರ, ಏಪ್ರಿಲ್ 3, 2012

ನವ-ಉದಾರವಾದ: ಬಡತನದ ತತ್ವಶಾಸ್ತ್ರ

ಹಣಕಾಸು ಕೊರತೆಯ ಹೊರೆಯನ್ನು ಇಳಿಸಲು ಶ್ರೀಮಂತರಿಗೆ ಕೊಡುವ ರಿಯಾಯ್ತಿಗಳನ್ನು ಬರ್ಖಾಸ್ತು ಮಾಡಬಾರದು, ಬಡವರಿಗೆಂದು ಇರುವ ಸಬ್ಸಿಡಿಗಳನ್ನು ಬರ್ಖಾಸ್ತು ಮಾಡಿಯೇ ಇಳಿಸಬೇಕು ಎಂದು ನವ-ಉದಾರವಾದ ನದರ್ೇಶಿಸುತ್ತದೆ. ಎಷ್ಟೆಂದರೂ ರಿಯಾಯ್ತಿಗಳು ಬೆಳವಣಿಗೆಗೆ ನಡುವ ಉತ್ತೇಜಕಗಳು ಹಾಗೂ ಸಬ್ಸಿಡಿಗಳು ಆರ್ಥಿಕ ವ್ಯವಸ್ಥೆಯ ಮೇಲಿನ ಹೊರೆಗಳಲ್ಲವೇ? ಇದೀಗ ಬಡತನದ ತತ್ವಶಾಸ್ತ್ರ. ಇದಕ್ಕೆ ಉತ್ತರವಾಗಿ ಮಾರ್ಕ್ಸ್ ಬರೆದ ತತ್ವಶಾಸ್ತ್ರದ ಬಡತನ ಎಂಬ ಕೃತಿಯಲ್ಲಿ ಕೊನೆಗೆ ಕಾರ್ಮಿಕ ವರ್ಗದ ವಿಮೋಚನೆಯನ್ನು, ಆಮೂಲಕ ಎಲ್ಲ ಶೋಷಿತ ವರ್ಗಗಳ ವಿಮೋಚನೆಯನ್ನು ಸಾಧಿಸುವಲ್ಲಿ ಮಹತ್ವದ ಸಂಗತಿಯೆಂದರೆ ಒಂದು ವರ್ಗವಾಗಿ ಕ್ರಾಂತಿಕಾರಿ ಅಂಶಗಳ ಸಂಘಟನೆ ಎಂದಿದ್ದಾರೆ. ಇದು ಕಾರ್ಮಿಕ ವರ್ಗದ ನೇತೃತ್ವದಲ್ಲಿ ಶೋಷಿತ ವರ್ಗಗಳ ರಾಜಕೀಯ ಶಕ್ತಿ- ಕಾರಕ ಅಂಶ; ಭಾರತದ ಮೂರ್ತ ಪರಿಸ್ಥಿತಿಗಳಲ್ಲಿ ಈ ಕಾರಕ ಅಂಶವನ್ನು ಬಲಪಡಿಸುವುದೇ ಮುಂಬರುವ ಸಿಪಿಐ(ಎಂ)ನ 20ನೇ ಮಹಾಧಿವೇಶನದ ಮುಂದಿರುವ ಅಜೆಂಡಾ. `ಪೀಪಲ್ಸ್ ಡೆಮಾಕ್ರಸಿ' ವಾರಪತ್ರಿಕೆಯ ಮಾರ್ಚ್ 29, 2012ರ ಸಂಚಿಕೆಯ ಸಂಪಾದಕೀಯ ನವ-ಉದಾರವಾದ: ಬಡತನದ ತತ್ವಶಾಸ್ತ್ರ ಸಾಮ್ರಾಜ್ಯಶಾಹಿ ಜಾಗತೀಕರಣವನ್ನು ಮುಂದೊತ್ತುವ ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ದಿಕ್ಕು-ದೆಸೆ ಶೋಷಣೆಯನ್ನು ತೀವ್ರಗೊಳಿಸುವ ಮೂಲಕ ಗರಿಷ್ಟ ಲಾಭ ಗಿಟ್ಟಿಸಲು ಪ್ರಯತ್ನಿಸುತ್ತದೆ, ಕೆಲವೊಮ್ಮೆ ಇದು ಕೊಳ್ಳೆ ಹೊಡೆಯುವ ಮಟ್ಟಕ್ಕೂ ಹೋಗುತ್ತದೆ- ಹೀಗೆ ಮಾಡುವಾಗ, ದೇಶದ ಒಳಗೂ, ಜಗತ್ತಿನ ಎಲ್ಲೆಡೆಯೂ ದುಡಿಯುವ ಜನಗಳ ವಿಶಾಲ ಜನಸಮೂಹದ ಮೇಲೆ ಅದು ಅಪಾರ ಸಂಕಟಗಳನ್ನು ಹೇರುತ್ತದೆ ಎಂದು ನಾವು ಈ ಅಂಕಣದಲ್ಲಿ ಹೇಳುತ್ತಾ ಬಂದಿದ್ದೇವೆ. ಜನಗಳ ನಿಜ ಜೀವನದ ಅನುಭವಗಳು ಪ್ರತಿದಿನ ಇದನ್ನು ದೃಢಪಡಿಸುತ್ತಿವೆ. ಬಡತನ ಉಲ್ಬಣಗೊಳ್ಳುತ್ತಿರುವುದು ಇದರ ನೇರ ಪರಿಣಾಮ. ಭಾರತದಲ್ಲಿ ಬಡತನ ಎಷ್ಟಿದೆ ಎಂಬ ಬಗ್ಗೆ ಈಗ ನಡೆಯುತ್ತಿರುವ ಚರ್ಚೆ ಕೆಲವೊಮ್ಮೆ ಅತಿ-ಯಥಾರ್ಥತೆಯ ಸ್ವರೂಪವನ್ನು ಕೂಡ ಪಡೆಯುತ್ತಿದೆ. ಭಾರತದಲ್ಲಿ ಈಗ ಆರ್ಥಿಕ ಸುಧಾರಣೆಗಳಿಗೆ ಮಾರ್ಗದರ್ಶನ ನೀಡುವ ಇಂತಹ ಒಂದು ಬಡತನದ ತತ್ವಶಾಸ್ತ್ರವಂತೂ ಖಂಡಿತಾ ಇದೆ ಎಂದು ಇದರಿಂದ ಮತ್ತೊಮ್ಮೆ ದೃಢಪಡುತ್ತದೆ. ಮಿಥ್ಯೆ ಸೃಷ್ಟಿಸುವ ಕಸರತ್ತು ನಮ್ಮ ದೇಶದ ಸಂಪನ್ಮೂಲಗಳ ಲೂಟಿ ಎರಡು ಮುಖ್ಯ ವಿಧಗಳಲ್ಲಿ ನಡೆಯುತ್ತಿದೆ. ಮೊದಲನೆಯದಾಗಿ, ಈ ಸುಧಾರಣೆಗಳು ಒಟ್ಟು ಆಥರ್ಿಕ ಅಸಮಾನತೆಗಳನ್ನು ಹೆಚ್ಚಿಸುತ್ತಲೇ ಇವೆ. ಹೊಳೆಯುವ ಭಾರತದ ಹೊಳಪಿಗೂ ನರಳುವ ಭಾರತದ ಶೋಷಣೆಯ ತೀವ್ರತೆಗೂ ನೇರ ಸಂಬಂಧವಿದ್ದಂತಿದೆ. ಎರಡನೆಯದಾಗಿ, ಇಂತಹ ಲೂಟಿ ಖಾಸಗಿ ಲಾಭಕ್ಕಾಗಿ ನಮ್ಮ ಸಂಪನ್ಮೂಲಗಳ ಬಹಿರಂಗ ಕೊಳ್ಳೆಯ ಮೂಲಕವೂ ನಡೆಯುತ್ತಿದೆ. ಮಹಾಹಗರಣಗಳ ಸರಮಾಲೆ ಇದನ್ನೇ ಬಿಂಬಿಸಿದೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಕ್ರಿಯೆಯನ್ನು ಕಾಯ್ದುಕೊಳ್ಳಬೇಕಾದರೆ ಅದಕ್ಕೆ ಪ್ರಜಾಸತ್ತಾತ್ಮಕ ಅನುಮೋದನೆ ಎಂಬುದರ ಸಮರ್ಥನೆ ಬೇಕಾಗುತ್ತದೆ. ದೇಶದಲ್ಲಿ ಬಡತನ ಆಥರ್ಿಕ ಸುಧಾರಣೆಗಳು ಸಾಗಿರುವ ದಿಕ್ಕಿನಿಂದಾಗಿ ಗಮನಾರ್ಹವಾಗಿ ಇಳಿದಿದೆ ಎಂಬ ಮಿಥ್ಯೆಗೆ ಜನಪ್ರಿಯತೆಯನ್ನು ಸೃಷ್ಟಿಸಿ ಜನಗಳನ್ನು ದಾರಿ ತಪ್ಪಿಸಿದರೆ ಇಂತಹ ಸಮರ್ಥನೆ ಲಭ್ಯವಾಗುತ್ತದೆ. ಇದು ಸುಳ್ಳುಗಳಿಂದ ತುಂಬಿದ ಅಂಕಿ-ಅಂಶಗಳನ್ನು ಉತ್ಪಾದಿಸುವ ಮೂಲಕ ಮಾತ್ರವೇ ಸಾಧ್ಯ. ಇಂತಹ ಒಂದು ಕಸರತ್ತು ಮಾರ್ಚ್ 19ರಂದು ಮತ್ತೊಮ್ಮೆ ಕಂಡು ಬಂದಿದೆ. ಅಂದು ಯೋಜನಾ ಆಯೋಗ ಪ್ರಕಟಿಸಿದ 2009-10ರ ಬಡತನದ ಅಂದಾಜುಗಳ ಪ್ರಕಾರ 2004-05 ಮತ್ತು 2009-10ರ ನಡುವೆ ಬಡತನ ಒಟ್ಟಾರೆಯಾಗಿ 7.3ಶೇ.ದಷ್ಟು ಇಳಿದಿದೆ. ಇದು 2009-10ರಲ್ಲಿ ದೈನಂದಿನ ತಲಾಬಳಕೆ ನಗರಪ್ರದೇಶದಲ್ಲಿ ರೂ. 28 ಮತ್ತು ಗ್ರಾಮೀಣ ಪ್ರದೇಶದಲ್ಲಿ ರೂ.22 ಎಂಬುದನ್ನು ಆಧರಿಸಿ ಮಾಡಿರುವ ಲೆಕ್ಕಾಚಾರ. ಇಂತಹ ಬೃಹತ್ ಮೋಸ ಬಹಳ ಸಮಯದಿಂದ ರೂಪುಗೊಳ್ಳುತಿತ್ತು. ಸುಪ್ರಿಂ ಕೋಟರ್ಿನಲ್ಲಿ ಒಂದು ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯ ವಿಚಾರಣೆಯಲ್ಲಿ ಮೇ 2011ರಲ್ಲಿ ಹಾಜರಾಗಬೇಕಾಗಿ ಬಂದ ಯೋಜನಾ ಆಯೋಗ ಜನಗಳನ್ನು ಬಡತನದ ರೇಖೆಯ ಮೇಲಿಡಲು ದೈನಂದಿನ ಖಚರ್ಿಗೆ ನಗರಪ್ರದೇಶದಲ್ಲಿ 20ರೂ. ಮತ್ತು ಗ್ರಾಮೀಣ ಪ್ರದೇಶದಲ್ಲಿ 15ರೂ. ಸಾಕು ಎಂದು ಹೇಳಿತ್ತು. ಯೋಜನಾ ಆಯೋಗದ ಪ್ರಕಾರ ನಗರಗಳಲ್ಲಿ ಯಾರ ಬಳಿಯಾದರೂ ತಿಂಗಳ ಖಚರ್ಿಗೆ 578ರೂ. ಇದ್ದರೆ ಆತ ಬಡವನಲ್ಲ. ಈ ತಿಂಗಳ ಖಚರ್ಿನಲ್ಲಿ ಬಾಡಿಗೆ ಮತ್ತು ಓಡಾಟಕ್ಕೆ 31ರೂ., ಶಿಕ್ಷಣಕ್ಕೆ 18ರೂ., ಔಷಧಿಗೆ 25ರೂ. ಮತ್ತು ತರಕಾರಿಗೆ 36.50 ಸೇರಿರುತ್ತದೆ. ನಿಜಕ್ಕೂ ಎಷ್ಟು ಅಸಂಬದ್ಧ! ಅಪಹಾಸ್ಯವೂ ಹೌದು, ಮೋಸಗಾರಿಕೆಯೂ ಹೌದು ಇದಕ್ಕೆ ಭಾರೀ ಸಾರ್ವಜನಿಕ ಆಕ್ರೋಶ ವ್ಯಕ್ತವಾದಾಗ ಸರಕಾರ ಈ ಹಾಸ್ಯಾಸ್ಪದ ಲೆಕ್ಕಾಚಾರವನ್ನು ಪರಿಷ್ಕರಿಸಬೇಕಾಗಿ ಬಂತು. ಯೋಜನಾ ಆಯೋಗದ ಉಪಾಧ್ಯಕ್ಷರು ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಿಗಳು ಸೆಪ್ಟಂಬರ್ 2011ರ ಅಂತ್ಯದ ವೇಳೆಗೆ ತಮ್ಮ ನಡುವೆಯೇ ಒಂದು ಸರಿಯಾದ ಅಂದಾಜಿಗೆ ತಲುಪಿದ್ದಾರೆ ಎಂದು ಹೇಳಲಾಯಿತು. ಇದು ತುಸು ಹೆಚ್ಚಿನ ಮಟ್ಟದ ಆದಾಯವನ್ನು ಆಧರಿಸಿದ ಅಂದಾಜಂತೆ. ಇದರ ಪ್ರಕಾರ ಗ್ರಾಮೀಣ ಭಾರತದಲ್ಲಿ 26ರೂ. ಮತ್ತು ನಗರ ಭಾರತದಲ್ಲಿ 32ರೂ. ದಿನದ ಆದಾಯ ಹೊಂದಿರುವ ಯಾವುದೇ ವ್ಯಕ್ತಿ ನಮ್ಮೀ ದೇಶದಲ್ಲಿ ಬಡವನಲ್ಲ! ಇನ್ನು ಮುಂದೆ ಬಡತನದ ಅಂದಾಜುಗಳು ಒಂದು ಹೊಸ ವಿಧಾನವನ್ನು ಆಧರಿಸಿರುತ್ತವೆ ಎಂದು ಸರಕಾರ ಪ್ರಕಟಿಸಿತು. ಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ವಸತಿ ಮತ್ತು ನಗರ ಬಡತನ ನಿವಾರಣಾ ಸಚಿವಾಲಯ ಸೇರಿಕೊಂಡು ಬಡತನದ ರೇಖೆಯ(ಬಿಪಿಎಲ್) ಕೆಳಗಿರುವ ಜನರ ಗಣತಿ ಮಾಡುವುದಾಗಿ ಹೇಳಲಾಯಿತು. ವರದಿಗಳ ಪ್ರಕಾರ, ಕೇಂದ್ರ ಸಂಪುಟ ಮಂಜೂರಾತಿ ನೀಡಿರುವ ವಿಧಾನದಲ್ಲಿ ಐದು ದುಡಿಯುವ ಸದಸ್ಯರಿರುವ ಒಂದು ಕುಟುಂಬದ ವಾಷರ್ಿಕ ಆದಾಯ 27,000ರೂ.ಗಿಂತ ಹೆಚ್ಚಿದ್ದರೆ ಅದು ತಂತಾನೇ ಬಿಪಿಎಲ್ ಪಟ್ಟಿಯಿಂದ ಹೊರಗೆ ಹೋಗುತ್ತದೆ. ಬಡವರು ಅಲ್ಲ ಎಂದು ಪರಿಗಣಿಸಲು ತಲಾ ತಿಂಗಳ ಆದಾಯ 447ರೂ.ಗಳಷ್ಟು ಇದ್ದರೆ ಸಾಕು ಎಂಬ ಆಧಾರದಲ್ಲಿ ಮಾಡಿರುವ ಈ ಲೆಕ್ಕಾಚಾರ ಯೋಜನಾ ಆಯೋಗದ ಕನಷ್ಟ ಮಟ್ಟದ ಪ್ರತಿಬಿಂಬವಷ್ಟೇ ಅಲ್ಲ, ವಾಸ್ತವವಾಗಿ ಅದಕ್ಕಿಂತಲೂ ಕೆಳ ಮಟ್ಟದ್ದು. ಈಗ ಯೋಜನಾ ಆಯೋಗ ಇಂತಹ ಹಾಸ್ಯಾಸ್ಪದ ಮಟ್ಟವನ್ನು ಇನ್ನಷ್ಟು ಕೆಳಗಿಳಿಸಿದೆ. ಈ ಕಪಟ ಕಸರತ್ತು ಒಂದು ಅಪಹಾಸ್ಯವೂ ಹೌದು, ಮೋಸಗಾರಿಕೆಯೂ ಹೌದು. ಒಬ್ಬ ವ್ಯಕ್ತಿ ಬದುಕುಳಿಯಲು ಪ್ರತಿದಿನ ಕನಿಷ್ಟ 2400 ಕ್ಯಾಲರಿ ಆಹಾರ ಬೇಕು ಎಂದು ಯೋಜನಾ ಆಯೋಗವೇ ಹೇಳುತ್ತದೆ. 2010ರಲ್ಲಿ ಇಷ್ಟು ಆಹಾರಕ್ಕೆ 44ರೂ.ಖಚರ್ಾಗುತ್ತಿತ್ತು. ಇಂದು ಇದು ಇನ್ನೂ ಹೆಚ್ಚು, ಈ ಜಿಪುಣ ಸರಕಾರ ಪ್ರಕಟಿಸಿರುವ ಇತ್ತೀಚಿನ ಅಂಕಿ-ಅಂಶದ ದುಪ್ಪಟ್ಟಾದರೂ ಅಗುತ್ತದೆ. ಯೋಜನಾ ಆಯೋಗ, ತನ್ನ ತರ್ಕದ ಪ್ರಕಾರ ಬಡತನದ ಅನುಪಾತ 2004-05ರಲ್ಲಿ 37.2ಶೇ. ಇದ್ದದ್ದು 2009-10ರಲ್ಲಿ 29.8ಶೇ.ಕ್ಕೆ ಇಳಿದಿದೆ ಎಂದು ಪರಿಗಣಿಸಿದೆ. ರಾಷ್ಟ್ರೀಯ ಸಲಹಾ ಮಂಡಳಿ ಸೂಚಿಸಿರುವ ಅನುಪಾತ 45ಶೇ. ಈ ಎರಡೂ ಅಂದಾಜುಗಳು ದಿವಂಗತ ಅಜರ್ುನ್ ಸೆನ್ಗುಪ್ತ ಮಾಡಿರುವ ಅಂದಾಜಿಗಿಂತ ಎಷ್ಟೋ ಕೆಳಗಿವೆ. ಅವರ ಪ್ರಕಾರ ಸದ್ಯ ನಮ್ಮ ಜನಸಂಖ್ಯೆಯ 77ಶೇ. ಮಂದಿ ದಿನಕ್ಕೆ 20ರೂ.ಗಿಂತ ಕಡಿಮೆ ಆದಾಯದ ಮೇಲೆ ಬದುಕಿದ್ದಾರೆ. ಇದು ಸುಮಾರು ಐದು ವರ್ಷಗಳ ಹಿಂದಿದ್ದ ವಾಸ್ತವ ಪರಿಸ್ಥಿತಿಗಳನ್ನು ಆಧರಿಸಿತ್ತು. ಅಂದಿನಿಂದ ಎಲ್ಲ ಜೀವನಾವಶ್ಯಕ ಸರಕುಗಳ ಬೆಲೆಗಳಲ್ಲಿ ನಿರಂತರವಾಗಿ ಆಗಿರುವ ಏರಿಕೆಗಳಿಂದಾಗಿ ಪರಿಸ್ಥಿತಿ ಖಂಡಿತವಾಗಿಯೂ ಇನ್ನಷ್ಟು ಹದಗೆಟ್ಟಿದೆ. ಏಕೀ ಮೋಸದ ಲೆಕ್ಕಾಚಾರ? ಅಸಮಾನತೆಗಳು ಹೆಚ್ಚುತ್ತಿವೆಯಷ್ಟೇ ಅಲ್ಲ, ಜೀವನಾಧಾರದ ಪರಿಸ್ಥಿತಿಗಳು ವಾಸ್ತವವಾಗಿ ಹದಗೆಟ್ಟಿರುವುದು ಬೇಸರದ ಸಂಗತಿ. ಉತ್ಸಾ ಪಟ್ನಾಯಕ್ ಅವರ ಮಹಾಕೃತಿ ದಿ ರಿಪಬ್ಲಿಕ್ ಆಫ್ ಹಂಗರ್(ಹಸಿವಿನ ಗಣರಾಜ್ಯ) ನಮ್ಮ ಜನತೆಯ ಈ ದುರದೃಷ್ಟಕರ ವಾಸ್ತವತೆಯ ವಿವರಗಳನ್ನು ಕೊಡುತ್ತದೆ. ಪಿ.ಸಾಯಿನಾಥ್ ಅವರ ಇತ್ತೀಚಿನ ಅಧ್ಯಯನ (ದಿ ಹಿಂದೂ, ಮಾರ್ಚ್ 25, 2012) 1972ರಿಂದ 1991ರ ನಡುವೆ ತಲಾ ಧಾನ್ಯಗಳು ಮತ್ತು ಬೇಳೆಕಾಳುಗಳ ದೈನಂದಿನ ಸರಾಸರಿ ಲಭ್ಯತೆ 434 ಗ್ರಾಂಗಳಿಂದ 480 ಗ್ರಾಂ ಗಳಿಗೇರಿತು. 1992ರಿಂದ 2010ರ ನಡುವೆ ಇದು 440 ಗ್ರಾಂಗಿಳಿಯಿತು. ಇದಕ್ಕೆ ಕಾರಣ ಜನಸಂಖ್ಯೆಯಲ್ಲಿ ಹೆಚ್ಚಳ ಎಂಬ ತರ್ಕವನ್ನೂ ಕೊಡುವಂತಿಲ್ಲ. ಏಕೆಂದರೆ, 1981ರಿಂದ 1991ರ ನಡುವೆ ಜನಸಂಖ್ಯೆಯ ಹೆಚ್ಚಳದ ದರ 2.16ಶೇ. ಮತ್ತು ಆಹಾರ ಧಾನ್ಯಗಳ ಉತ್ಪಾದನೆಯ ಹೆಚ್ಚಳದ ದರ 3.13ಶೇ. ಆದರೆ ಸುಧಾರಣಾ ಪ್ರಕ್ರಿಯೆ ಆರಂಭವಾದ ನಂತರ ಆಹಾಧಾನ್ಯಗಳ ಉತ್ಪಾದನೆ ಇಳಿಯಿತು. 1991-2001ರ ಅವಧಿಯಲ್ಲಿ ಜನಸಂಖ್ಯೆಯ ಹೆಚ್ಚಳದ ದರ 1.95ಶೇ.ವಾದರೆ ಆಹಾರ ಧಾನ್ಯಗಳ ಉತ್ಪಾದನೆಯ ಹೆಚ್ಚಳದ ದರ 1.1ಶೇ. 2001-2011ರ ಅವಧಿಯಲ್ಲಿ ಜನಸಂಖ್ಯಾ ಹೆಚ್ಚಳದ ದರ 1.65ಶೇ.ವಾದರೆ, ಆಹಾರಧಾನ್ಯಗಳ ಉತ್ಪಾದನೆಯ ಹೆಚ್ಚಳದ ದರ 1.03ಶೇ. ಆದ್ದರಿಂದ ಇಲ್ಲಿರುವ ಪ್ರಶ್ನೆ ಬಡತನ ತುಲನಾತ್ಮಕವಾಗಿ ಹೆಚ್ಚುತ್ತಿದೆ ಎಂಬುದಲ್ಲ, ಒಟ್ಟಾರೆಯಾಗಿಯೂ ಬಡತನ ಹೆಚ್ಚುತ್ತಿದೆ. ಈ ಪರಿಸ್ಥಿತಿಯನ್ನು ಸರಿಪಡಿಸಬೇಕಾದರೆ ಆಮ್ ಆದ್ಮಿಗೆ ಆಹಾರ ಭದ್ರತೆಯನ್ನು, ಒಂದು ಉತ್ತಮ ಮಟ್ಟದ ಜೀವನ ದೊರೆಯುವಂತೆ ಮಾಡಲು ಅಗತ್ಯವಾದ ಸಬ್ಸಿಡಿಗಳನ್ನು ಒದಗಿಸುವುದೇ ಏಕೈಕ ಮಾರ್ಗ. ಆದರೆ ಈಗ ಹಣಕಾಸು ಕೊರತೆಗೆ ಕಡಿವಾಣ ಹಾಕುವ ಹೆಸರಿನಲ್ಲಿ ಈ ಸಬ್ಸಿಡಿಗಳ ಮೇಲೆಯೇ ಗುರಿಯಿಡಲಾಗಿದೆ. ಪ್ರಸಕ್ತ ಬಜೆಟ್ ದಸ್ತಾವೇಜುಗಳ ಪ್ರಕಾರ ಹಣಕಾಸು ಕೊರತೆಯ ಪ್ರಮಾಣ 5.9ಶೇ. ಅಂದರೆ ಸುಮಾರು 5.22 ಲಕ್ಷ ಕೋಟಿ ರೂ.ಗಳು. ಅದೇ ಅವಧಿಯಲ್ಲಿ ಕಾರ್ಪೋರೇಟ್ ಗಳಿಗೆ ಮತ್ತು ಶ್ರೀಮಂತರಿಗೆ ನೀಡಿದ ತೆರಿಗೆ ರಿಯಾಯ್ತಿಗಳ ಮೊತ್ತ 5.28ಲಕ್ಷ ಕೋಟಿ ರೂ.ಗಳು. ಹಿಂದಿನ ಬಜೆಟಿನಲ್ಲಿ ಮಂಜೂರಾದ ಈ ನ್ಯಾಯಬದ್ಧ ತೆರಿಗೆಗಳನ್ನು ವಸೂಲಿ ಮಾಡಿದ್ದರೆ, ಹಣಕಾಸು ಕೊರತೆ ಎಂಬುದೇ ಇರುತ್ತಿರಲಿಲ್ಲ. ಬದಲಾಗಿ ಮಿಗುತೆ ಇರುತ್ತಿತ್ತು. ನಜ, ನವ-ಉದಾರವಾದದ ತತ್ವಶಾಸ್ತ್ರ-ಅಂದರೆ ಬಡತನದ ತತ್ವಶಾಸ್ತ್ರ- ಕೊರತೆಯ ಹೊರೆಯನ್ನು ಶ್ರೀಮಂತರಿಗೆ ಕೊಡುವ ಇಂತಹ ರಿಯಾಯ್ತಿಗಳನ್ನು ಬಖರ್ಾಸ್ತು ಮಾಡಿ ಇಳಿಸಬಾರದು ಎಂದು ನಿರ್ದೇಶಿಸುತ್ತದೆ. ಎಷ್ಟೆಂದರೂ ಇವೆಲ್ಲಾ ಬೆಳವಣಿಗೆಗೆ ನಡುವ ಉತ್ತೇಜಕಗಳು ತಾನೇ! ಈ ಕೊರತೆಯನ್ನು ಬಡವರಿಗೆಂದು ಇರುವ ಸಬ್ಸಿಡಿಗಳನ್ನು ಬರ್ಖಾಸ್ತು ಮಾಡಿಯೇ ಇಳಿಸಬೇಕು- ಇವು ಆರ್ಥಿಕ ವ್ಯವಸ್ಥೆಯ ಮೇಲಿನ ಹೊರೆಗಳಲ್ಲವೇ? ಈ ಪ್ರಕಾರವೇ, ಪ್ರಸಕ್ತ ಬಜೆಟಿನಲ್ಲಿ ಇಂಧನ ಸಬ್ಸಿಡಿಯಲ್ಲಿ ಇನ್ನೂ 25,000 ಕೋಟಿ ರೂ., ರಸಗೊಬ್ಬರ ಸಬ್ಸಿಡಿಯಲ್ಲಿ 6000 ಕೋಟಿ ರೂ. ಇತ್ಯಾದಿ ಕಡಿತ ಮಾಡಲಾಗಿದೆ. ಹೆಚ್ಚಿನ ಈ ಸಬ್ಸಿಡಿಗಳು ಬಡತನದ ರೇಖೆಯ ಕೆಳಗಿನ(ಬಿಪಿಎಲ್) ಜನತೆಗೆ ತಲುಪುವಂತದ್ದಾದ್ದರಿಂದ, ಇವನ್ನು ಜಾರಿಗೆ ತರುವ ಏಕೈಕ ದಾರಿಯೆಂದರೆ ಬಿಪಿಎಲ್ ಸಂಖ್ಯೆಗಳನ್ನೇ ಕಡಿತಗೊಳಿಸುವುದು. ಯೋಜನಾ ಅಯೋಗದ ಮೋಸದ ಲೆಕ್ಕಾಚಾರಗಳೆಲ್ಲಾ ಇದಕ್ಕಾಗಿಯೇ. ಪರಿವರ್ತನೆಯ ಕಾರಕ ಅಂಶ ಪ್ರೌಧೋನ್ ಎಂಬಾತನ ಕೃತಿ ಬಡತನದ ತತ್ವಶಾಸ್ತ್ರದಲ್ಲಿನ ವಾದಗಳನ್ನು ಖಂಡಿಸುತ್ತಾ ಬರೆದ ತನ್ನ ಪ್ರಖ್ಯಾತ ಕೃತಿ ತತ್ವಶಾಸ್ತ್ರದ ಬಡತನದಲ್ಲಿ ಕಾಲರ್್ ಮಾಕ್ಸರ್್ ಜಗತ್ತನ್ನು ಅರಿಯಬೇಕಾಗಿದೆಯಷ್ಟೇ ಅಲ್ಲ, ಅದನ್ನು ಬದಲಾಯಿಸಬೇಕಾಗಿದೆ ಎಂಬ ತನ್ನ ಕಣ್ಣೋಟವನ್ನು ಪ್ರಸ್ತುತ ಪಡಿಸುತ್ತಾ, ಕೊನೆಯಲ್ಲಿ ಹೀಗೆ ಹೇಳಿದ್ದಾರೆ-ವರ್ಗವೈಷಮ್ಯಗಳ ಮೇಲೆ ನಂತಿರುವ ಪ್ರತಿಯೊಂದು ಸಮಾಜದಲ್ಲೂ ಒಂದು ದಮನತ ವರ್ಗ ಎಂಬುದು ಜೀವನ್ಮರಣ ಪರಿಸ್ಥಿತಿ. ಹೀಗೆ ದಮನಕ್ಕೊಳಗಾದ ವರ್ಗದ ವಿಮೋಚನೆಯೆಂದರೆ ಒಂದು ಹೊಸ ಸಮಾಜದ ನಮರ್ಾಣವೆಂದೇ ಅರ್ಥ. ದಮನಕ್ಕೊಳಗಾದ ವರ್ಗ ತನ್ನನ್ನು ವಿಮೋಚನೆಗೊಳಿಸಿಕೊಳ್ಳಬೇಕಾದರೆ, ಅದಾಗಲೇ ಪಡೆದಿರುವ ಉತ್ಪಾದಕ ಶಕ್ತಿಗಳು ಮತ್ತು ಅಸ್ತಿತ್ವದಲ್ಲಿರುವ ಸಾಮಾಜಿಕ ಸಂಬಂಧಗಳು ಇನ್ನು ಮುಂದೆ ಅಕ್ಕ-ಪಕ್ಕದಲ್ಲಿರಲು ಸಾಧ್ಯವಿಲ್ಲ ಎಂದಾಗಬೇಕು. ಉತ್ಪಾದನೆಯ ಸಾಧನಗಳಲ್ಲೆಲ್ಲ ಮಹಾನ್ ಉತ್ಪಾದಕ ಶಕ್ತಿಯೆಂದರೆ ಸ್ವತಃ ಕ್ರಾಂತಿಕಾರಿ ವರ್ಗವೇ. ಕ್ರಾಂತಿಕಾರಿ ಅಂಶಗಳು ಒಂದು ವರ್ಗವಾಗಿ ಸಂಘಟಿತವಾಗಿವೆಯೆಂದರೆ ಹಳೆಯ ಸಮಾಜದ ಎದೆಯಲ್ಲಿ ಉಂಟು ಮಾಡಬಹುದಾದ ಎಲ್ಲ ಉತ್ಪಾದಕ ಶಕ್ತಿಗಳ ಅಸ್ತಿತ್ವವಿದೆ ಎಂದರ್ಥ. ಹೀಗೆ, ಕಾರ್ಮಿಕ ವರ್ಗದ ವಿಮೋಚನೆ ಯನ್ನು, ಆಮೂಲಕ ಎಲ್ಲ ಶೋಷಿತ ವರ್ಗಗಳ ವಿಮೋಚನೆಯನ್ನು ಸಾಧಿಸುವಲ್ಲಿ ಮಹತ್ವದ ಸಂಗತಿಯೆಂದರೆ ಒಂದು ವರ್ಗವಾಗಿ ಕ್ರಾಂತಿಕಾರಿ ಅಂಶಗಳ ಸಂಘಟನೆ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇದು ಕಾರ್ಮಿಕ ವರ್ಗದ ನೇತೃತ್ವದಲ್ಲಿ ಶೋಷಿತ ವರ್ಗಗಳ ರಾಜಕೀಯ ಶಕ್ತಿ- ಕಾರಕ ಅಂಶ; ಇದು ಮನುಷ್ಯನಿಂದ ಮನುಷ್ಯನ ಶೋಷಣೆಯಿಲ್ಲದ ಒಂದು ಸಮಾಜದ ನಿರ್ಮಾಣಕ್ಕೆ ಅಗತ್ಯವಾದ ಮತ್ತು ಸಾಕಾಗುವ ಅಂಶ. ಭಾರತದ ಮೂರ್ತ ಪರಿಸ್ಥಿತಿಗಳಲ್ಲಿ ಈ ಕಾರಕ ಅಂಶವನ್ನು ಬಲಪಡಿಸುವುದೇ ಮುಂಬರುವ ಸಿಪಿಐ(ಎಂ) 20ನೇ ಮಹಾಧಿವೇಶನದ ಮುಂದಿರುವ ಪ್ರಶ್ನೆ. ಭಾರತದ ಸಮಾಜವಾದಿ ಪರಿವರ್ತನೆಗೆ ನಾಂದಿಯಾಗಿ ಒಂದು ಯಶಸ್ವಿ ಜನತಾ ಪ್ರಜಾಪ್ರಭುತ್ವ ಕ್ರಾಂತಿಯ ವ್ಯೂಹಾತ್ಮಕ ಗುರಿಯನ್ನು ಸಾಧಿಸಲು ಪಕ್ಷ ಅಂಗೀಕರಿಸಬೇಕಾದ ಸರಿಯಾದ ತಂತ್ರಾತ್ಮಕ ಮಾರ್ಗ ಈ ಮಹಾಧಿವೇಶನದ ಅಜೆಂಡಾದ ತಿರುಳು. ಇದು ಸಾಧ್ಯವಾಗಬೇಕಾದರೆ ಈ ಗುರಿಸಾಧನೆಗೆ ಅಗತ್ಯವಾದ ಕಾರಕ ಅಂಶವನ್ನು ಬಲಪಡಿಸಲು ಇರುವ ಅಡೆ-ತಡೆಗಳ ಸವಾಲುಗಳನ್ನು ಎದುರಿಸಿ, ಮೀರಿ ನಿಲ್ಲಬೇಕಾಗಿದೆ. ಹೀಗೆ ಸಿಪಿಐ(ಎಂ) 20ನೇ ಮಹಾಧಿವೇಶನ, ಭಾರತದ ಮತ್ತು ಅದರ ಜನತೆಯ ಹಿತದೃಷ್ಟಿಯಿಂದ ಈ ಚಾರಿತ್ರಿಕ ಕರ್ತವ್ಯವನ್ನು ಈಡೇರಿಸಲು ಅಗತ್ಯವಾದ ಕಾರ್ಯತಂತ್ರಗಳನ್ನು ರೂಪಿಸಿ, ಅಗತ್ಯ ಸಂಘಟನಾ ಕ್ರಮಗಳನ್ನು ವಹಿಸುವ ಜವಾಬ್ದಾರಿ ಹೊಂದಿದೆ

ವೃತ್ತಿ ಶಿಕ್ಷಣ ಶುಲ್ಕ ಏರಿಕೆ - ಸಕರ್ಾರ ಖಾಸಗಿ ಕಾಲೇಜುಗಳ ಜೊತೆ ಶಾಮೀಲು; ಎಸ್,ಎಫ್.ಐ. ಪ್ರತಿಭಟನೆ

ವೃತ್ತಿ ಶಿಕ್ಷಣ ಶುಲ್ಕ ಏರಿಕೆ - ಸಕರ್ಾರ ಖಾಸಗಿ ಕಾಲೇಜುಗಳ ಜೊತೆ ಶಾಮೀಲು; ಎಸ್,ಎಫ್.ಐ. ಪ್ರತಿಭಟನೆ. 2012-13 ನೇ ಸಾಲಿನ ವೈದ್ಯಕೀಯ-ದಂತ ವೈದ್ಯಕೀಯ- ಎಂಜಿನಿಯರಿಂಗ್ ಇನ್ನಿತರೆ ವೃತ್ತಿ ಶಿಕ್ಷಣ ಕೊಸರ್್ಗಳ ಶುಲ್ಕವನ್ನು ಶೇಕಡ 10 ರಷ್ಟು ಹೆಚ್ಚಿಸಿರುವ ರಾಜ್ಯ ಸಕರ್ಾರದ ನಿಧರ್ಾರವನ್ನು ವಿರೋಧಿಸಿ ಭಾರತ ವಿದ್ಯಾಥರ್ಿ ಫೆಡರೇಷನ್(ಎಸ್ಎಫ್ಐ) ಕೊಪ್ಪಳ ಜಿಲ್ಲಾ ಸಮಿತಿ ನಗರದ ಬಸ್ ನಿಲ್ಚಾಣದ ಮುಂದೆ ಇಂದು ಪ್ರತಿಭಟನೆ ನಡೆಸಿತು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಎಸ್.ಎಫ್.ಐ ರಾಜ್ಯ ಉಪಾಧ್ಯಕ್ಷ ಗುರುರಾಜ್ ದೇಸಾಯಿ ಮಾತನಾಡುತ್ತಾ, ಶನಿವಾರ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರವರ ಅಧ್ಯಕ್ಷತೆಯಲ್ಲಿ ಕಾಮೆಡ್-ಕೆ, ಖಾಸಗಿ ಎಂಜಿನಿಯರಿಂಗ್, ಮೆಡಿಕಲ್, ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಮತ್ತು ಸಕರ್ಾರದ ಹಿರಿಯ ಅಧಿಕಾರಿಗಳನ್ನೊಳಗೊಂಡ ಸಭೆಯಲ್ಲಿ ಈ ತೀಮರ್ಾನ ಕೈಗೊಳ್ಳುವ ಮೂಲಕ ರಾಜ್ಯ ಸಕರ್ಾರ ಖಾಸಗಿ ಆಡಳಿತ ಮಂಡಳಿಗಳನ್ನು ಇನ್ನಷ್ಟು ಕೊಬ್ಬಿಸುವ ಹಾಗೂ ದಲಿತ-ಹಿಂದುಳಿದ-ಅಲ್ಪಸಂಖ್ಯಾತ-ಮದ್ಯಮ ವರ್ಗದ ವಿದ್ಯಾಥರ್ಿಗಳನ್ನು ವೃತ್ತಿ ಶಿಕ್ಷಣದಿಂದ ವಂಚಿಸಲು ಹೊರಟಿದೆ. ಈಗಾಗಲೇ ನಿಗದಿ ಮಾಡಿರುವ ಶುಲ್ಕಗಳು ಬಡ ವಿದ್ಯಾಥರ್ಿಗಳ ಕೈಗೆಟುಕುವಂತಿಲ್ಲ. ಇಂತಹ ಸಂದರ್ಭದಲ್ಲಿ ಮತ್ತೆ ಶೇ 10 ರಷ್ಟು ಶುಲ್ಕ ಹೆಚ್ಚಳ ಮಾಡಿರುವುದನ್ನು ನೋಡಿದರೆ ರಾಜ್ಯ ಬಿಜೆಪಿ ಸಕರ್ಾರ ಖಾಸಗಿ ಕಾಲೇಜುಗಳ ಜೊತೆ ಶಾಮಿಲಾಗಿರುವುದು ಸ್ಪಷ್ಟವಾಗುತ್ತದೆ. ಬೆಲೆ ಏರಿಕೆ, ಬರಗಾಲದಿಂದ ತತ್ತರಿಸಿರುವ ಜನತೆ ದುಬಾರಿ ಶಿಕ್ಷಣ ಶುಲ್ಕಗಳನ್ನು ನೀಡಿ ತಮ್ಮ ಮಕ್ಕಳನ್ನು ವೃತ್ತಿ ಶಿಕ್ಷಣಕ್ಕೆ ಕಳುಹಿಸಲು ಸಾದ್ಯವಾಗುವುದಿಲ್ಲ. ಕಳೆದ ಎಂಟು ವರ್ಷಗಳಿಂದ ರಾಜ್ಯಸಕರ್ಾರ ವೃತ್ತಿ ಶಿಕ್ಷಣದ ಸಕರ್ಾರಿ ಸೀಟುಗಳನ್ನು ಖಾಸಗಿ ಕಾಲೇಜುಗಳಿಗೆ ಬಿಟ್ಟುಕೊಡುತ್ತಾ, ವಿಪರೀತ ಶುಲ್ಕ ಏರಿಕೆ ಮಾಡುತ್ತಾ ವೃತ್ತಿ ಶಿಕ್ಷಣದ ವ್ಯಾಪಾರಿಕರಣಕ್ಕೆ ಕುಮ್ಮಕ್ಕು ನೀಡಿತು. ಇದರ ಪರಿಣಾಮವೇ ಪ್ರತಿಭಾವಂತ ವಿದ್ಯಾಥರ್ಿಗಳ ಆತ್ಮಹತ್ಯೆ. ಆದ್ದರಿಂದ ರಾಜ್ಯಸಕರ್ಾರ ತಕ್ಷಣ ಶುಲ್ಕ ಏರಿಕೆ ನಿಧರ್ಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು. ಸಕರ್ಾರಿ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಸೀಟು ಹಂಚಿಕೆ 75 : 25 ರ (ಸಕರ್ಾರಿ : ಖಾಸಗಿ) ಅನುಪಾತದಲ್ಲಿರಬೇಕು. ಈಗಾಗಲೇ ಏರಿಕೆ ಮಾಡಿರುವ ಶುಲ್ಕಗಳನ್ನು ತಕ್ಷಣ ಕಡಿತಗೊಳಿಸಿ ಬಡ ವಿದ್ಯಾಥರ್ಿಗಳ ಕೈಗೆಟುಕುವಂತೆ ಶುಲ್ಕಗಳನ್ನು ನಿಗದಿ ಮಾಡಬೇಕು. ಪ.ಜಾ./ಪ.ವರ್ಗದ ವಿದ್ಯಾಥರ್ಿಗಳ ಶುಲ್ಕ ವಿನಾಯಿತಿ ಹಣವನ್ನು ತಕ್ಷಣ ಬಿಡುಗಡೆಗೊಳಿಸಬೇಕು. ಬರಗಾಲ ಪೀಡಿತ ಜಿಲ್ಲೆಗಳ ವೃತ್ತಿ ಶಿಕ್ಷಣ ವಿದ್ಯಾಥರ್ಿಗಳ ಶುಲ್ಕವನ್ನು ಮನ್ನಾ ಮಾಡಬೇಕು. ಹೊಸ ಎಂಜಿನಿಯರಿಂಗ್, ಮೆಡಿಕಲ್, ಹಾಗೂ ದಂತ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಬೇಕು. ಇರುವ ಸಕರ್ಾರಿ ಕಾಲೇಜುಗಳಿಗೆ ಎಲ್ಲಾ ರೀತಿಯ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂಬ ಬೇಡಿಕೆಗಳುಳ್ಳ ಪಟ್ಟಿಯನ್ನುಮತ್ತು 238 ವಿದ್ಯಾಥರ್ಿಗಳ ಸಹಿಯೊಂದಿಗೆ ಮುಖ್ಯಮಂತ್ರಿಗಳಿಗೆ ನೀಡಲಾಯಿತು. ಸಿಂಪಿ ಲಿಂಗಣ್ಣ ರಸ್ತೆಯಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಬಸ್ ನಿಲ್ದಾಣ ತಲುಪಿ. ಅಲ್ಲಿ ವಿದ್ಯಾಥರ್ಿಗಳಿಂದ ಸಹಿ ಸಂಗ್ರಹ ಮಾಡಲಾಯಿತು. ಪ್ರತಿಭಟನಾ ನೇತ್ರತ್ವವನ್ನು ಎಸ್.ಎಫ್.ಐ ತಾಲ್ಲೂಕ ಅಧ್ಯಕ್ಷ ಮಾರುತಿ ಮ್ಯಾಗಳಮನಿ, ಕಾರ್ಯದಶರ್ಿ ಸುಬಾನ್ ಸೈಯ್ಯದ್, ದೇವರಾಜ್ ನಾಯಕ್. ಶೇಖರ್ ಎಂ, ಶಬ್ಬೀರ್ಸಾಬ್, ಈರಪ್ಪ ಚಿಲಕಮುಲಕಿ, ಹಾಲಸ್ವಾಮಿ, ಪ್ರವೀಣ, ಸಂತೋಷ ಅನೀಲ್ ಕುಮಾರ್, ಮನೋಹರ್, ಯಮನೂರಪ್ಪ ಸೇರಿದಂತೆ ಅನೇಕ ವಿದ್ಯಾಥರ್ಿಗಳು ಭಾಗವಹಿಸಿದ್ದರು.

ಶುಕ್ರವಾರ, ಮಾರ್ಚ್ 30, 2012

ಎ.ಬಿ.ವಿ.ಪಿ ಯಾವುದರ ಪರ ?!

ಎ.ಬಿ.ವಿ.ಪಿ ಯಾವುದರ ಪರ ?!
-------------------------------
ಅಖಿಲ ಭಾರತ ವಿದ್ಯಾಥರ್ಿ ಪರಿಷತ್(ಎ.ಬಿ.ವಿ.ಪಿ) ಕೇಸರಿಕರಣದ ಬಗ್ಗೆ ಮಾತನಾಡುತ್ತಿದೆ ! ಎನಾಶ್ಚರ್ಯ ಅಲ್ಲವೆ. ಕೋಮಿವಾದಿಗಳಿಂದಲೆ ಕೋಮುವಾದವನ್ನು ವಿರೋಧಿಸುವ ನಾಟಕ ಯಾರಿಗೆ ತಿಳಿಯುವುದಿಲ್ಲವೆಂದು ಎ.ಬಿ.ವಿ.ಪಿ ಅಂದುಕೊಂಡಿದ್ದರೆ ಅದೂ ಅವರ ಮುರ್ಖತನ. ಬೆಂಗಳೂರು ವಿ.ವಿ ಬಿ.ಎ ತೃತೀಯ ಸೆಮಸ್ಟರ್ ಕನ್ನಡ ವಿಷಯದಲ್ಲಿರುವ' ಕೋಮುವಾದ ಮತ್ತು ಮಹಿಳೆ ' ಎಂಬ ಪಾಠವನ್ನು ಪಠ್ಯಪುಸ್ತಕದಿಂದ ತೆಗೆಯುವಂತೆ ಒತ್ತಾಯಿಸಿ ಎ.ಬಿ.ವಿ.ಪಿ ಪ್ರತಿಭಟನೆ ನಡೆಸುತ್ತಿದೆ.
ಎ.ಬಿ.ವಿ.ಪಿ.ಗೆ ಪಠ್ಯಪುಸ್ತಕದಲ್ಲಿನ ಲೇಖನ ಅರ್ಥವಾಗಿಲ್ಲ: ಬಹು ಹಿಂದಿನಿಂದಲು ಬೆಂಗಳೂರು ವಿಶ್ವವಿದ್ಯಾಲಯವು ಕೆಲವು ವೈಚಾರಿಕ-ವೈಜ್ಞಾನಿಕ-ಜೀವಪರ ಸಾಹಿತ್ಯವನ್ನು ಪಠ್ಯವಾಗಿಸುತ್ತಾ ಬರುತ್ತಿರುವುದು ಶ್ಲಾಘನೀಯ. ಪ್ರಸಕ್ತ ಬಿ.ಎ ತೃತೀಯ ಸೆಮಿಸ್ಟರ್ ವಿದ್ಯಾಥರ್ಿಗಳಿಗೆ ಹೆಸರಾಂತ ಲೇಖಕಿಯಾದ ಡಾ|| ಸಬಿಹಾ ಭೂಮಿಗೌಡರವರು ಕನ್ನಡ ವಿಷಯದಲ್ಲಿ ಬರೆದಿರುವ' ಕೋಮುವಾದ ಮತ್ತು ಮಹಿಳೆ ' ಎಂಬ ಪಾಠ ಅರ್ಥಪೂರ್ಣವಾಗಿದೆ. ಈ ಪಾಠವು ಕೋಮುವಾದದ ಕರಾಳ ಮುಖವಾಡವನ್ನು ವಿವರಿಸುತ್ತಾ, ಅದರಲ್ಲೂ ಮಹಿಳೆಯರು ಮತ್ತು ದುರ್ಬಲರು ಹೇಗೆ ಕೋಮುವಾದಕ್ಕೆ ಬಲಿಯಾಗುತ್ತಿದ್ದಾರೆಎಂಬುದನ್ನು ವಿವರಿಸುತ್ತದೆ. ಎಲ್ಲಾ ಧರ್ಮಗಳ ಹೆಸರಿನಲ್ಲಿಕೋಮುವಾದವನ್ನು ವಿರೋಧಿಸಿ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕೆಂದು ವಿವರಿಸಿ ವಿದ್ಯಾಥರ್ಿಗಳು ವಿಶ್ವ ಮಾನವತೆಕಡೆಗೆ ತೆರೆದುಕೊಳ್ಳಲು ಈ ಪಾಠತುಂಬಾ ಸಹಕಾರಿಯಾಗಿದೆ.ದೇವರ ಹೆಸರಿನಲ್ಲಿ ಮಹಿಳೆಯ ಶೋಷಣೆಯನ್ನು ಸಮಥರ್ಿಸುವ ಮತ್ತು ಅಂಧಕಾರದ ಕರಾಳತೆಯನ್ನು ಬಯಲುಗೊಳಿಸುವಲ್ಲಿ ಡಾ|| ಶಶಿಕಲಾ ವೀರಯ್ಯಸ್ವಾಮಿಯವರು ಬರೆದಿರುವ 'ನನ್ನವತಾರ' ಕವನ ಅರ್ಥಪೂರ್ಣ ಹಾಗೂ ತುಂಬಾವಾಸ್ತವತೆಯನ್ನು ಹೇಳುತ್ತದೆ.
ಆದಾಗ್ಯೂ ಎ.ಬಿ.ವಿ.ಪಿ ಪಠ್ಯಪುಸ್ತಕದಲ್ಲಿ ಕೋಮುವಾದೀಕರಣ ಅಳವಡಿಸಲಾಗಿದೆ ಎಂದು ಪ್ರತಿಭಟಿಸುತ್ತಿರುವುದರ ಹಿಂದನ ರಹಸ್ಯ ಮಾತ್ರ ಅವರ ದೇವರಿಗೆ ಗೊತ್ತು. ಅದ್ವಾನಿ, ಸುಷ್ಮಾಸ್ವರಾಜ್, ಉಮಾಭಾರತಿ, ಜಿನ್ನಾ ಇತ್ವಾದಿ ನಾಯಕರ ಕುರಿತು ಪಠ್ಯದಲ್ಲಿ ಪ್ರಸ್ಥಾಪವಿದೆ. ಗುಜಾರಾತ್ ಹತ್ಯಾಕಂಡ ಕುರಿತು ಸತ್ಯ ಶೋದನೆ ವರದಿ ಮಾಡಲಾಗಿದೆ. ಸಿಕ್ ದಂಗೆಯ ಕುರಿತು, ಪಾಕ್ ಮತ್ತು ಬಾಂಗ್ಲಾದೇಶ ದಲ್ಲಿ ಹಿಂದುಗಳ ಮಹಿಳೆಯರ ಮೇಲೆ ನಡೆಯುತ್ತಿರುವದಾಳಿ. ಭಾರತದಲ್ಲಿ ಹಿಂದುಗಳು ಮುಸ್ಲಿಮ್ ಮಹಿಳೆಯರ ಮೇಲೆ ನಡೆಸುತ್ತಿರುವ ದಾಳಿ ಕುರಿತು ಕೋಮುವಾದ ಮುಖವಾಡವನ್ನು ತೋರಿಸಲಾಗಿದೆ. ಗುಜರಾತ್ತ ನಲ್ಲಿ ಮಹಿಳೆಯರ ಮೇಲೆ ನಡೆಸಿರುವ ಅತ್ಯಾಚಾರ, ದಬ್ಬಾಳಿಕೆಯ ನಿಜಾಂಶ ಇದರಲ್ಲಿದೆ. ಎಲ್ಲ ಧರ್ಮಗಳು ಕೋಮುವಾದದ ಹೆಸರಲ್ಲಿ ಹೇಗೆ ಶೋಷಣೆ ಮಾಡುತ್ತವೆ ಎಂಬುದನ್ನಿ ತಿಳಿಸಿ ವಿದ್ಯಾಥರ್ಿಗಳು ಸೌಹಾರ್ಧದಿಂದ ಇರಲು ಸಹಕಾರಿಯಾಗಿರುವ ಮತ್ತು ಪ್ರಗತಿಪರವಾಗಿ ಅವರು ಬಲಗೊಳ್ಳುವಂತೆ ಮಾಡಿರುವ ಲೇಖನವನ್ನು ಎ.ಬಿ.ವಿ.ಪಿ ತೆಗೆದು ಹಾಕಿ ಎನ್ನುವದರ ಹಿಂದೆ ರಾಜಕೀಯ ಷಡ್ಯಂತ್ರವಿದೆ.
ಡಾ|| ಶಶಿಕಲಾ ರವರು ಉತ್ತರ ಕನರ್ಾಟಕದ ಭಾಷೆಯಲ್ಲಿ ಕೃಷ್ಣನ ಕುರಿತಾದ ಕವಿತೆಗಳಿವೆ. ' ಮಹಿಳೆಯರೊಂದಿಗೆ ಚಕ್ಕಂದವಾಡು ಕೃಷ್ಣನೆ ಹೆಚ್ಚ ಸಮಯವನ್ನು ಅವರೊಂದಿಗೆ ಕಳೆಯಬೇಡ. ದೀನ ದಲಿತರನ್ನು, ದುರ್ಬಲರನ್ನು ನುನ್ನ ಕೈ ನಿಂದ ಮೇಲೆತ್ತು. ನಿನ್ನ ಪಿತಾಂಬರದಲ್ಲಿ ಅವರ ಮೈ ಮುಚ್ಚಲು ಸ್ವಲ್ಪ ಬಟ್ಟೆಯನ್ನು ಬಡವರಿಗೆ ನೀಡು ' ಎಂಬ ಸಾಲುಗಳಲ್ಲಿ ಕೋಮುವಾದವನ್ನು ಹುಡುಕಲು ಎ.ಬಿ.ವಿ.ಪಿ ಮುಂದಾಗಿರುವುದೆ. ಅವರ ತಿಳುವಳಿಕೆ ಮತ್ತಯ ಅವರು ಪಠ್ಯವನ್ನು ಹೇಗೆ ಅರ್ಥಮಾಡಿ ಕೊಂಡಿದ್ದಾರೆ ಎಂಬುದು ಅರ್ಥವಾಗುತ್ತದೆ. ತುಂಬಾ ಹಿಂದೆ ಪ್ರಕಟವಾದ ಈ ಸಾಹಿತ್ಯದಕುರಿತು ಚಕಾರಎತ್ತದ ಎ.ಬಿ.ವಿ.ಪಿ ಸಂಘಟನೆ ಈಗ ಪರೀಕ್ಷೆಗೆ ಹತ್ತು ದಿನ ಬಾಕಿ ಉಳಿದಿರುವ ಸಂದರ್ಭದಲ್ಲಿ ಇವುಗಳ ವಿರುದ್ಧಅಪಸ್ವರವೆತ್ತಿ ವಿದ್ಯಾಥರ್ಿಗಳ ಮಧ್ಯೆಗೊಂದಲ ಸೃಷ್ಠಿಸಲು ಹೊರಟಿರುವುದು ಅದರ ಕೋಮುವಾದೀ ಧೋರಣೆ ಹಾಗೂ ವಿದ್ಯಾಥರ್ಿ ವಿರೋಧಿ ನೀತಿಯನ್ನು ಬಯಲುಗೊಳಿಸಿದೆ.
ಎ.ಬಿ.ವಿ.ಪಿ ಯಾವುದರ ಪರ: ರಾಜ್ಯ ಸಕರ್ಾರ ಭ್ರಷ್ಠಾಚಾರದಲ್ಲಿತೊಡಗಿದೆ, ಶಿಕ್ಷಣದ ವ್ಯಾಪಾರಕ್ಕೆಯಥೇಚ್ಛವಾಗಿ ಅವಕಾಶ ಕಲ್ಪಿಸುತ್ತ್ತಿದೆ. ಸಕರ್ಾರಿ ಶಾಲೆ-ಹಾಸ್ಟೆಲ್ಗಳನ್ನು ಮುಚ್ಚಿ ಖಾಸಗೀ ವಿ.ವಿಸ್ಥಾಪಿಸುತ್ತಿದೆ. ಸಕರ್ಾರ ಶಿಕ್ಷಕ-ಉಪನ್ಯಾಸಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ವಿದ್ಯಾಥರ್ಿಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಬೇಡಿಕೆಗಳಿಗೆ ಹೋರಾಟ ಮಾಡುವ ಬದಲು ಎ.ಬಿ.ವಿ.ಪಿ ಧರ್ಮದ ಹೆಸರಿನಲ್ಲಿ ವಿದ್ಯಾಥರ್ಿಗಳನ್ನು ದಿಕ್ಕು ತಪ್ಪಿಸಲು ಹೊರಟಿರುವುದು ಎ.ಬಿ.ವಿ.ಪಿ ಯಾರ ಪರವಾಗಿದೆ ಎಂಬುದು ಗೊತ್ತಾಗಿದೆ. ಕೇದ್ರ ಸರಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಇವರಿಗೆ ರಾಜ್ಯದಲ್ಲಿ ಅವರ 'ಪ್ರೀತಿಯ' ಸರಕಾರ ಮಾಡುತ್ತಿರುವ ಬ್ರಷ್ಟಾಚಾರ ಕಾಣುತ್ತಿಲ್ಲವೆ. ರಾಜ್ಯ ಸರಕಾರದ ಪರ ವಕಾಲತ್ತು ವಹಿಸುವ ಎ.ಬಿ.ವಿ.ಪಿ ಮೊದಲು ಬೆಂಗಳೂರು ವಿ.ವಿ ಧ್ಯೆಯಗಳನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳಲ್ಲಿ. ' ಗುಣಾತ್ಮಕ ಶಿಕ್ಷಣ ನೀಡಿ ಆ ಮೂಲಕ ವೈಜ್ಞಾನಿಕ ಶಿಕ್ಷಣ ನೀಡುತ್ತೆವೆ ಎಂಬ ವಿ.ವಿ ಧ್ಯೆಯವನ್ನು ಹತ್ತಿಕ್ಕತ್ತಿರುವುದನ್ನು ನೋಡಿದರೆ ಇದು ಸವರ್ಾಧಿಕಾರಿ ಧೋರಣೆ ಎಂದೆನಿಸುತ್ತದೆ. ಹಾಗಾಗಿ ಎ.ಬಿ.ವಿ.ಪಿ ವಿದ್ಯಾಥರ್ಿಗಳ ಪರವಾಗಿ ಇದೆಯೋ ಅಥವಾ ರಾಜ್ಯ ಸರಕಾರದ ಬಾಲಂಗೋಚಿ 'ಪುಡಿ' ಸಂಘಟನೆಯೋ ಎಂಬುದನ್ನು ಖಚಿತ ಪಡಿಸಲಿ.

ಈ ಪಠ್ಯಗಳ ಕುರಿತಂತೆ ಸಂಪಾದಕೀಯ ಮಂಡಳಿ ಹಾಗೂ ಉಪನ್ಯಾಸಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕೋಮುವಾದದ ಅಪಾಯಗಳನ್ನು ಮತ್ತು ದೇವರು ಧರ್ಮದ ಹೆಸರಿನ ಪೌರೋಹಿತ ಶಾಹಿಗಳಿಂದ ಸಮಾಜವನ್ನು ರಕ್ಷಿಸುವಕುರಿತು ಅನೇಕ ಅಂಶಗಳನ್ನು ಈ ಪಠ್ಯಗಳಲ್ಲಿ ಕಾಣಿಸಲಾಗಿದೆ. ಹೀಗಾಗಿ ಈ ಪಠ್ಯವನ್ನು ಕೈಬಿಡುವುದಾಗಲೀ ಅಥವಾ ಈ ಲೇಖಕಿಯ ಮೇಲೆ ಕ್ರಮ ಕೈಗೊಳ್ಳುವ ಹೆಸರಿನಲಿ ್ಲಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಸಿಯುವಂತಹ ಯಾವುದೇ ಪ್ರಯತ್ನಗಳಿಗೆ ಬೆಂಗಳೂರು ವಿ.ವಿ ಮುಂದಾಗದೆ, ವಿದ್ಯಾಥರ್ಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿಕೊಡಬೇಕೆಂದು ವಿನಂತಿ.
ಲೇಖನ -- ಗುರುರಾಜ್ ಎನ್. ದೇಸಾಯಿ ತಲ್ಲೂರು.9449260183